www.bantwalnews.com
ತುಂಬೆಯ ಜನರು ಸಜಿಪಮುನ್ನೂರಿಗೆ, ಸಜಿಪಮುನ್ನೂರು ಗ್ರಾಮದ ಜನರು ಮೊದಲು ತುಂಬೆ ಫರಂಗಿಪೇಟೆಗೆ ಹೇಗೆ ಬರಬೇಕಿತ್ತು ಗೊತ್ತೇ?
ಆಲಾಡಿ, ಇಂದಿರಾನಗರ, ಉದ್ದೊಟ್ಟು ಮೊದಲಾದ ಪ್ರದೇಶಗಳ ಜನರು ಫರಂಗಿಪೇಟೆ, ಮಂಗಳೂರು ಮೊದಲಾದ ಕಡೆಗೆ ಬರಬೇಕಾದರೆ, ಸಜಿಪ, ಮೇಲ್ಕಾರು, ಬಿ.ಸಿ.ರೋಡ್ ಮಾರ್ಗ ಕ್ರಮಿಸಬೇಕಿತ್ತು.
ಧೈರ್ಯವಿದ್ದರೆ, ಸಜಿಪಮುನ್ನೂರು–ಆಲಾಡಿಯಿಂದ ದೋಣಿ ಮೂಲಕ ನದಿ ದಾಟಿ ತುಂಬೆಗೆ ಬಂದು ಬಳಿಕ ಸಂಚಾರ ಮುಂದುವರಿಸಬೇಕಾಗಿತ್ತು. ಅದೇ ರೀತಿ ತುಂಬೆ, ಫರಂಗಿಪೇಟೆಯವರಿಗೆ ಸಜಿಪಮುನ್ನೂರಿಗೆ ಹೋಗಬೇಕಿದ್ದರೆ ಇಂಥದ್ದೇ ಪ್ರಯಾಸ.
ಆದರೆ ಯಾವಾಗ ತುಂಬೆಯಲ್ಲಿ ಡ್ಯಾಂ ನಿರ್ಮಾಣವಾಯಿತೋ ಈ ಭಾಗದ ಜನರ ಪ್ರಯಾಸವಂತೂ ಕಡಿಮೆಯಾಯಿತು.
ಸುಮಾರು ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಡ್ಯಾಂ ಮೂವತ್ತಾರು ಪಿಲ್ಲರ್ಗಳನ್ನು ಒಳಗೊಂಡಿದ್ದು ನೇತ್ರಾವತಿ ನದಿಯುದ್ದಕ್ಕೂ ತುಂಬೆಯಿಂದ ಸಜಿಪಮುನ್ನೂರು ಗ್ರಾಮದ ಆಲಾಡಿ ಪ್ರದೇಶಕ್ಕೆ ಸೇತುವೆಯಂತೆ ನೇರ ಸಂಪರ್ಕ ಕಲ್ಪಿಸಿದೆ. ಡ್ಯಾಂ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಈ ಸೇತುವೆ ಮಾದರಿ ನಿರ್ಮಾಣದಿಂದಾಗಿ ಇದನ್ನು ಈ ಎರಡೂ ಗ್ರಾಮಗಳ ಜನ ತಮ್ಮ ಕಾಲ್ನಡಿಗೆ ಸಂಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸಜಿಪ ಮುನ್ನೂರು ಆಸುಪಾಸಿನ ಆರು ಗ್ರಾಮಗಳ ಜನತೆಗೆ ಇದು ಲಾಭವಾಗಿದೆ. ಸುಮಾರು 5000 ಮನೆಗಳು ಈ ವ್ಯಾಪ್ತಿಯಲ್ಲಿವೆ.
ತುಂಬೆ ನೂತನ ಡ್ಯಾಂ ಈಗಾಗಲೇ ಕಾರ್ಯಾರಂಭಗೊಂಡಿದ್ದರೂ ಇದರ ಅಧಿಕೃತ ಉದ್ಘಾಟನೆ ಕಾರ್ಯ ಮಾತ್ರ ಇನ್ನೂ ನೆರವೇರಿಲ್ಲ. ಡ್ಯಾಂ ಉದ್ಘಾಟನೆ ವೇಳೆಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ರಕ್ಷಣಾ ಕ್ರಮ ಅಳವಡಿಸುವ ಮೂಲಕ ಇಲ್ಲಿನ ಕನಿಷ್ಠ ಕಾಲು ದಾರಿಯನ್ನು ಉಳಿಸುವ ಮೂಲಕ ಅಥವಾ ಈ ಎರಡೂ ಗ್ರಾಮಗಳ ಮಧ್ಯೆ ತೂಗುಸೇತುವೆಯನ್ನಾದರೂ ನಿರ್ಮಿಸುವ ಮೂಲಕ ಈ ಎರಡೂ ಗ್ರಾಮಗಳ ಮಧ್ಯೆ ಇರುವ ಕನಿಷ್ಠ ಸಂಚಾರದ ಅನುಕೂಲತೆಯನ್ನು ಉಳಿಸಿಕೊಳ್ಳಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ