ಪಾಕಶಾಲೆಯೇ ವೈದ್ಯಶಾಲೆ

ಬಿಸಿನೀರೂ ಔಷಧಿ ಎಂಬುದು ಗೊತ್ತೇ?

  • ಡಾ. ಎ.ಜಿ. ರವಿಶಂಕರ್
  • ಅಂಕಣ: ಪಾಕಶಾಲೆಯೇ ವೈದ್ಯಶಾಲೆ

ಬಿಸಿನೀರು ನಿತ್ಯ ಬಳಕೆಯ ದ್ರವ್ಯವಾಗಿದ್ದರೂ ಎಷ್ಟೋ ಜನರಿಗೆ ಅದರ ಔಷಧೀಯ  ಪ್ರಾಮುಖ್ಯತೆ ತಿಳಿದಿರುವುದಿಲ್ಲ.  ಬಿಸಿನೀರನ್ನು ಆರೋಗ್ಯದ ಸಂಜೀವಿನಿ ಎಂದರೂ ತಪ್ಪಾಗಲಾರದು.

ಜಾಹೀರಾತು

ಬಾಹ್ಯ ಉಪಯೋಗಗಳು:

  1. ಮೂಗು ಮತ್ತು ಗಂಟಲಲ್ಲಿ ಕಫ ಗಟ್ಟಿಯಾಗಿ ಅವುಗಳು ಮುಚ್ಚಿದಂತಾದರೆ ಬಿಸಿನೀರಿನ ಆವಿ ತೆಗೆದುಕೊಳ್ಳಬೇಕು.
  2. ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಶರೀರದ ನೋವು ಹಾಗು ಆಯಾಸ ಕಡಿಮೆಯಾಗುತ್ತದೆ.
  3. ಬಿಸಿನೀರಿನ ಸ್ನಾನ ದೇಹದ ರಕ್ತ ಸಂಚಾರವನ್ನು ಅಧಿಕ ಗೊಳಿಸುತ್ತದೆ ಮತ್ತು ಚರ್ಮಕ್ಕೆ ಕಾಂತಿಯನ್ನು ನೀಡಿ ಅಕಾಲಿಕ ಸುಕ್ಕು ಕಟ್ಟುವುದನ್ನು ತಡೆಯುತ್ತದೆ.
  4. ಕಾಲಿನ ಹಿಮ್ಮಡಿ ನೋವು ಇದ್ದರೆ ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಕಿ ಕಾಲು ಮುಳುಗಿಸಿ ಇಡಬೇಕು.
  5. ಶರೀರದಲ್ಲಿ ಕುರ ಇದ್ದಾಗ ಅದರ ಮೇಲೆ ಬಿಸಿನೀರಿನ ಶೇಕ ಕೊಟ್ಟಲ್ಲಿ ಬೇಗನೆ ಕುರ ಸೊರುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
  6. ಮುಖದಲ್ಲಿ ಗಟ್ಟಿಯಾದ ಮೊಡವೆಗಳು ಮೂಡಿದಾಗ ಬಿಸಿನೀರಿನ ಆವಿ ತೆಗೆದುಕೊಳ್ಳಬೇಕು.
  7. ಕೈ ಅಥವಾ ಕಾಲು ಉಳುಕಿದಾಗ ಅವುಗಳ ಮೇಲೆ ಎಣ್ಣೆ ಹಚ್ಚಿ ಬಿಸಿನೀರಿನ ಶೇಕ ಕೊಟ್ಟರೆ ನೋವು ಹಾಗು ಬಾವು ಕಡಿಮೆಯಾಗುತ್ತದೆ.
  8. ಮೂಲವ್ಯಾಧಿ ಬಾವು ಬಂದು ವಿಪರೀತ ನೋವು ಇದ್ದಾಗ ಬಿಸಿನೀರಿನಲ್ಲಿ ದಿನಕ್ಕೆ 2 ರಿಂದ 3 ಬಾರಿ ಕುಳಿತುಕೊಳ್ಳಬೇಕು.
  9. ಶರೀರದಲ್ಲಿ ಗಾಯ ಅಥವಾ ಹುಣ್ಣು ಇದ್ದಾಗ ಚೆನ್ನಾಗಿ ಕುದಿಸಿ ಆರಿಸಿದ ನೀರಿನಲ್ಲಿ ತೊಳೆಯಬೇಕು
  10. ಮೂಳೆ ಮುರಿತ್ತಕ್ಕೊಳಗಾಗಿ, ಪ್ಲಾಸ್ಟರ್ ತೆಗೆದ ನಂತರ ಬಿಸಿನೀರಿನ ಶೇಕ ಕೊಟ್ಟರೆ ಬೇಗನೆ ಮೊದಲಿನಂತೆ ಚಟುವಟಿಕೆ ಮಾಡಲು ಸಾಧ್ಯವಾಗುತ್ತದೆ.
  11. ಸಂಧುವಾತದಲ್ಲಿ ಸ್ವಲ್ಪ ಎಳ್ಳೆಣ್ಣೆ ಹಚ್ಚಿ ಬಿಸಿನೀರಿನ ಶೇಕ ಕೊಟ್ಟರೆ ಸಂಧುಗಳ ನೋವು ಕಡಿಮೆಯಾಗುತ್ತದೆ ಮತ್ತು ಚಲನಾ ಶಕ್ತಿ ಅಧಿಕವಾಗುತ್ತದೆ.

ವಿಶೇಷ ಸೂಚನೆ:

ನಿತ್ಯ ಸ್ನಾನ ಮಾಡುವಾಗ ತಲೆಗ ಬಿಸಿನೀರನ್ನು ಹಾಕಬಾರದು. ಇದರಿಂದ ಕೂದಲು,ಕಣ್ಣು ಹಾಗು ಹೃದಯದ ಶಕ್ತಿ ಕಡಿಮೆಯಾಗುತ್ತದೆ.

ಆಭ್ಯಂತರ ಉಪಯೋಗಗಳು …. ಮುಂದಿನವಾರ 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.