ಬಂಟ್ವಾಳ

8ರಂದು ಕಯ್ಯೂರಿನಲ್ಲಿ ರಕ್ತದಾನ ಶಿಬಿರ

ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಂಚಿ ಕಯ್ಯೂರು ಇದರ ಪಂಚ ವಾರ್ಷಿಕೋತ್ಸವದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಅ.೮ರಂದು ಭಾನುವಾರ ಬೆಳಿಗ್ಗೆ ೯:೩೦ ರಿಂದ ಮಧ್ಯಾಹ್ನ ೧:೩೦ ರ ತನಕ ಲಯನ್ಸ್ ಕ್ಲಬ್ ಮಂಚಿಕಟ್ಟೆಯಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಂಚಿ ಕಯ್ಯೂರು ಅಧ್ಯಕ್ಷ ಜನಾಬ್ ಡಿ.ಎನ್. ಫಾರೂಕ್ ಅಧ್ಯಕ್ಷತೆಯಲ್ಲಿ ರಿಫಾಯಿಯ್ಯಾ ಜುಮಾ ಮಸೀದಿ ಮಂಚಿ ಕೊಳ್ನಾಡು ಇದರ ಅಧ್ಯಕ್ಷ ಅಬೂಬಕ್ಕರ್ ಲತೀಫಿ ಎಣ್ಮೂರು ದುವಾಶೀರ್ವಚನದೊಂದಿಗೆ, ರಿಫಾಯಿಯ್ಯಾ ಜುಮಾ ಮಸೀದಿ ಮಂಚಿ,ಕೊಳ್ನಾಡು ಇದರ ಖತೀಬ್ ಸಾಲಿಂ ಸಅದಿ ಅಲ್ ಅಫ್ಳಲಿ ಮಂಚಿ ಇವರು ಉದ್ಘಾಟಿಸಲಿದ್ದಾರೆ. ಅಶ್ರಫ್ ಮಂಚಿ  ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಲಯನ್ಸ್ ರೇಮಂಡ್ ರೊಝಾರಿಯೋ,ಲಯನ್ ಗೋಪಾಲ್ ಆಚಾರ್ಯ,ಎಂ.ಡಿ. ಮಂಚಿ, ಮುಸ್ತಫಾ ಅಡ್ಡೂರು ದೆಮ್ಮಲೆ, ಸತ್ತಾರ್ ಕೃಷ್ಣಾಪುರ, ಅಶ್ರಫ್ ಕಲ್ಕಟ್ಟ, ದಿನೇಶ್ ಕುಮಾರ್ ಕಯ್ಯೂರು, ಬದ್ರುದ್ದೀನ್ ಕಯ್ಯೂರು, ಮುಹಮ್ಮದ್ ಮಂಚಿ, ಮೋಹನ್ ದಾಸ್ ಶೆಟ್ಟಿ, ಇಬ್ರಾಹಿಂ ಜಿ.ಎಂ., ಎಂ.ಎಸ್.ಸುಲೈಮಾನ್, ಆಸಿಫ್ ಸಿ.ಎಚ್.,ಹನೀಫ್ ಮಂಚಿ,ಎ.ಕೆ. ಸುಲೈಮಾನ್, ಗಫ್ಫಾರ್ ಕುಕ್ಕಾಜೆ ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.