ಬಂಟ್ವಾಳ

ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ 2019ರಲ್ಲಿ ಪೂರ್ಣ: ನಳಿನ್

ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ 2019ರಲ್ಲಿ ಸಂಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಂಸದ ನಳಿನ್ ಕುಮಾರ್ ಕಟೀಲ್ ವ್ಯಕ್ತಪಡಿಸಿದ್ದಾರೆ.

ಜಾಹೀರಾತು

ಬಿ.ಸಿ.ರೋಡಿನಲ್ಲಿ ಸರ್ವೀಸ್ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚತುಷ್ಪಥ ರಸ್ತೆಗೆ ಸಂಬಂಧಿಸಿದಂತೆ ಕಲ್ಲಡ್ಕದಲ್ಲಿ ಫ್ಲೈಓವರ್ ಕುರಿತ ಸಮಸ್ಯೆಗಳು ಮುಗಿದರೆ, 2019ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.

ಪಾಣೆಮಂಗಳೂರು, ಮೇಲ್ಕಾರ್ ಸಹಿತ ಹೆದ್ದಾರಿಯಲ್ಲಿ ಬೃಹದಾಕಾರದ ಹೊಂಡಗಳನ್ನು ಮುಚ್ಚಿಸಿ, ದುರಸ್ತಿಗೊಳಿಸುವ ಕಾರ್ಯವನ್ನು ಎಲ್.ಅಂಡ್ ಟಿ ಮಾಡಲಿದೆ. ಇದು ಮಳೆಗಾಲದ ಬಳಿಕ ನಡೆಯಲಿದೆ ಎಂದು ನಳಿನ್ ಹೇಳಿದರು.

ಶೌಚಾಲಯ, ರೆಸ್ಟ್ ರೂಮ್ ಗಳಿಗೆ 3 ಕೋಟಿ ರೂಪಾಯಿಯನ್ನು ಎಂಆರ್‌ಪಿಎಲ್ ಒದಗಿಸಲಿದ್ದು, ಇದಕ್ಕೆ ಪುರಸಭೆ ಜಾಗ ಒದಗಿಸಿಲ್ಲ. ಹೀಗಾಗಿ ಎನ್.ಎಚ್.ಎ.ಐ. ಜಾಗದಲ್ಲಿ ಬಿ.ಸಿ.ರೋಡಿನ ನಾಲ್ಕು ಮಾರ್ಗ ಸೇರುವ ನಾರಾಯಣಗುರು ವೃತ್ತದ ಸಮೀಪ ರೆಸ್ಟ್ ರೂಮ್ ನಿರ್ಮಿಸಲಾಗುವುದು ಎಂದು ನಳಿನ್ ಹೇಳಿದರು.

ನಳಿನ್ ಹೇಳಿದ ಅಭಿವೃದ್ಧಿಗೊಳ್ಳುವ ರಸ್ತೆಗಳು

  1. ಬಿ.ಸಿ.ರೋಡಿನಿಂದ ಪೊಳಲಿ-ಕಟೀಲು ಮಾರ್ಗವಾಗಿ ಮುಲ್ಕಿ, ಮೆಲ್ಕಾರ್ ಜಂಕ್ಷನ್‌ನಿಂದ ಕೊಣಾಜೆ-ತೊಕ್ಕೊಟ್ಟು, ಸಿದ್ದಕಟ್ಟೆ-ಮೂಡುಬಿದಿರೆ, ಕಲ್ಲಡ್ಕ-ಚೆರ್ಕಳ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸಲ್ಲಿಸುರವ ಪ್ರಸ್ತಾವನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಇದರಲ್ಲಿ ಎರಡು ರಸ್ತೆಯನ್ನು ರಾ.ಹೆ.ಪ್ರಾ. ಹಾಗೂ ಇನ್ನೆರಡು ರಸ್ತೆಯ ಕಾಮಗಾರಿಗಳನ್ನು ಪಿಡಬ್ಲ್ಯೂಡಿ ಇಲಾಖೆ ನಿರ್ವಹಿಸಲಿದೆ.
  2. ಬಿ.ಸಿ.ರೋಡ್‌ನಿಂದ ಚಾರ್ಮಡಿವರೆಗಿನ ರಸ್ತೆಯ ಪ್ರಥಮ ಹಂತದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಇದನ್ನು 3 ಮೀಟರ್‌ನಷ್ಟು ಅಗಲೀಕರಣ ಮಾಡಲಾಗುವುದು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.