ಬಂಟ್ವಾಳ

ಪುನರುಜ್ಜೀವಗೊಂಡ ಹಡಿಲು ಗದ್ದೆ


ನಾರಿಕೊಂಬೇಶ್ವರ ದೇವಳದ ಮುಂಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಹಡಿಲಾಗಿದ್ದ ೧.೭೫ ಎಕರೆ ಗದ್ದೆ ಇಂದು ಸಾವಯವ ಬತ್ತದ ಕೃಷಿಯೊಂದಿಗೆ ಪುನರುಜ್ಜೀವಗೊಂಡಿದೆ.
ನರಿಕೊಂಬಿನ ವಿವೇಕ ಜಾಗೃತ ಬಳಗ ಹಾಗೂ ವಿವೇಕ ಕಿರಣ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಈ ಸಾವಯವ ಬತ್ತದ ಕೃಷಿ ಕೈಂಕರ್ಯವನ್ನು ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ನೇಜಿ ನೆಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ಚಂದ್ರಶೇಖರ ಮರ್ದೋಳಿ, ಉಪಾಧ್ಯಕ್ಷ ಮಾಧವ ಅಂಚನ್, ಸಾಲಿಗ್ರಾಮದ ಡಿವೈನ್ ಪಾರ್ಕ್(ರಿ) ಇದರ ಪದಾಧಿಕಾರಿ ಗಿರೀಶ್ ಹೆಗಡೆ, ಶಿಕ್ಷಕ ಮಧೂಸೂದನ್ ಮೊದಲಾದವರು ಹಾಜರಿದ್ದು ಮಾರ್ಗದರ್ಶನ ನೀಡಿದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.