Pic: Kishore Peraje
ಬಿ.ಸಿ.ರೋಡ್ ಸರ್ವೀಸ್ ರಸ್ತೆಗೆ ಸರ್ವೀಸ್ ಮಾಡೋ ಕೆಲಸ ಆರಂಭಗೊಂಡಿದೆ. ಇದೀಗ ಕಾಂಕ್ರೀಟ್ ಹಾಕಲು ಪೂರ್ವಭಾವಿ ಕೆಲಸಗಳು ಮಂಗಳವಾರ ಶುರುವಾಗಿದೆ ಎಂದು ಮೂಲಗಳು ಬಂಟ್ವಾಳನ್ಯೂಸ್ ಗೆ ತಿಳಿಸಿವೆ. ಈ ಕುರಿತು ಎಲ್ಲ ಮಾಧ್ಯಮಗಳು ಸರಣಿ ವರದಿಗಳನ್ನು ಪ್ರಕಟಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದವು.
Pic: Kishore Peraje
pic: Ashok M G
Ashoka M G
kishore peraje
ಹೊಂಡಗಳ ಸಮಸ್ಯೆಯಿಂದ ಇಲ್ಲಿಗೆ ಆಗಮಿಸುವ ವಾಹನಗಳು ಆಯತಪ್ಪಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲ್ಲೇ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುವ ಕಾರಣ ಇತರ ವಾಹನಗಳಿಗೂ ತೆರಳಲು ಕಷ್ಟಕರವಾದ ಪರಿಸ್ಥಿತಿ ಇತ್ತು. ಪ್ರಯಾಣಿಕರಿಗೆ ನಿಲ್ಲಲು ಕಷ್ಟವಾಗುತ್ತಿದ್ದರೆ, ಪಾದಚಾರಿಗಳಿಗೆ ನಡೆದಾಡಲೂ ಪ್ರಯಾಸಪಡಬೇಕಾದ ಸ್ಥಿತಿ ಉಂಟಾಗಿತ್ತು. ಹಲವು ಪ್ರಯಾಣಿಕರು ಬಂಟ್ವಾಳನ್ಯೂಸ್ ಜೊತೆ ಈ ಸಮಸ್ಯೆಯ ಕುರಿತು ಅಳಲು ತೋಡಿಕೊಂಡಿದ್ದರು.
ಬಂಟ್ವಾಳ ನ್ಯೂಸ್ ಈ ಕುರಿತು ಹಿಂದೆ ಪ್ರಕಟಿಸಿದ ವಿಶೇಷ ವರದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)