ಬಂಟ್ವಾಳ

ತಳಮಟ್ಟದ ಜನರಿಗೆ ಅಧಿಕಾರ ಸಿಕ್ಕಿದರೆ ನೈಜ ಸ್ವಾತಂತ್ರ್ಯ: ಇಕ್ಬಾಲ್

ರಾಜಕೀಯ ಅಧಿಕಾರ, ಶೈಕ್ಷಣಿಕ ಹಾಗೂ ನಾಗರಿಕ ಸೇವಾ ಹುದ್ದೆಗಳು ಸಮಾಜದ ಅತ್ಯಂತ ತಳಮಟ್ಟದ ಜನರ ಕೈಗೆಟುಕುವವರೆಗೂ ಈ ದೇಶದ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರಲು ಸಾಧ್ಯವಿಲ್ಲ ಎಂದು ಬಂಟ್ವಾಳ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಐಎಂಆರ್ ಗೂಡಿನಬಳಿ ಹೇಳಿದರು.


ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ದೇಶದ ೭೧ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ವಿವಿಧ ಸರಕಾರಗಳು ದೇಶದಲ್ಲಿ ಆಡಳಿತ ನಡೆಸಿದರೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಇಂದಿಗೂ ಅನ್ಯಾಯವಾಗುತ್ತಲೇ ಇದೆ. ಭ್ರಷ್ಟಾಚಾರ-ಕೋಮುವಾದಗಳು ಈ ದೇಶದ ಜಾತ್ಯಾತೀತತೆ ಹಾಗೂ ಸಾಹೋದರ್ಯತೆಗೆ ಡೊಡ್ಡ ಸವಾಲಾಗಿ ಪರಿಣಮಿಸಿದೆ. ಇವುಗಳನ್ನು ಪರಿಣಾಮಕಾರಿಯಾಗಿ ಮಟ್ಟ ಹಾಕುವವರೆಗೆ ಹಾಗೂ ಸಮಾಜದ ತಳಮಟ್ಟದ ಜನರ ಕೈಗೆ ಅಧಿಕಾರ ಹಾಗೂ ಶೈಕ್ಷಣಿಕ ಹಾಗೂ ನಾಗರಿಕ ಸೇವಾ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್, ಕೆಎಎಸ್ ಮೊದಲಾದವುಗಳು ತಲುಪುವವರೆಗೂ ಈ ದೇಶದಲ್ಲಿ ಸಮಗ್ರ ಅಭಿವೃದ್ದಿ ಸಾಧ್ಯವಿಲ್ಲ ಎಂದವರು ವಿಶ್ಲೇಷಿಸಿದರು.
ಕಾಲೇಜು ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮ್‌ಪ್ರಕಾಶ್ ಡಿ’ಕ್ರೂಝ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಜಗದೀಶ್ ಕುಂದರ್, ಲೋಕೇಶ್ ಪೂಜಾರಿ ಅಲೆತ್ತೂರು, ಲೋಲಾಕ್ಷ ಶೆಟ್ಟಿ, ಕಾಲೇಜು ಆಡಳಿತ ಸಮಿತಿ ಸದಸ್ಯರಾದ ಲತೀಫ್ ಖಾನ್ ಗೂಡಿನಬಳಿ, ರಮೇಶ್ ಪೂಜಾರಿ ಪೂಂಜರಕೋಡಿ, ಸುಧಾಕರ ಮಡಿವಾಳ, ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಮೊದಲಾದವರು ಭಾಗವಹಿಸಿದ್ದರು.
ಕಾಲೇಜು ಉಪನ್ಯಾಸಕರಾದ ಯೂಸುಫ್ ವಿಟ್ಲ ಸ್ವಾಗತಿಸಿ, ದಾಮೋದರ್ ವಂದಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.