ಕಲ್ಲಡ್ಕ

ಸೌತ್ ಕೆನರಾ ಫೊಟೋಗ್ರಾಫರ್‍ಸ್ ಎಸೋಸಿಯೇಶನ್ ಅಧ್ಯಕ್ಷ ಹರೀಶ್ ಮಾಣಿ

ಸೌತ್ ಕೆನರಾ ಪೊಟೋಗ್ರಾಫರ್‍ಸ್ ಎಸೋಸಿಯೇಶನ್ (ರಿ) ೨೦೧೭-೧೯ ರ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಮಾಣಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸುಕುಮಾರ್ ಬಂಟ್ವಾಳ, ಉಪಾಧ್ಯಕ್ಷರಾಗಿ ರಾಜರತ್ನ, ರವಿಪ್ರಕಾಶ್, ಹರೀಶ್ ಕುಂದರ್, ಕಾರ್‍ಯದರ್ಶಿಯಾಗಿ ರೋಶನ್ ಸುವಾರಿ, ಜತೆ ಕಾರ್‍ಯದರ್ಶಿ ವಿಕೇಶ್ ಬಂಟ್ವಾಳ, ಮಹೇಶ್ ಶೆಟ್ಟಿ, ಕೋಶಾಧಿಕಾರಿಯಾಗಿ ಬಾಲಕೃಷ್ಣ, ಸಂಘಟನಾ ಕಾರ್‍ಯದರ್ಶಿ ಕಿಶೋರ್ ಮುಡಿಪು, ವರುಣ್ ಕಲ್ಲಡ್ಕ ಆಯ್ಕೆಗೊಂಡರು.
ಕ್ರೀಡಾ ಕಾರ್‍ಯದರ್ಶಿ ಶರತ್ ಕಲ್ಲಡ್ಕ, ವಿವೇಕ್ ಅಮ್ಟಾಡಿ, ರಿಚರ್ಡ ಲೊರೆಟ್ಟೊ, ಸಾಂಸ್ಖೃತಿಕ ಕಾರ್‍ಯದರ್ಶಿ ಸಂತೋಷ್ ಮಂಚಿ, ಬಾಸ್ಕರ್ ಬಂಟ್ವಾಳ್, ಪತ್ರಿಕಾ ಪ್ರತಿನಿಧಿ ಲಕ್ಷಣ್ ಮೆಲ್ಕಾರ್ , ಗೌರವ ಸಲಹೆಗಾರರಾಗಿ ಹರೀಶ್ ರಾವ್ ಬಂಟ್ವಾಳ್, ದಯಾನಂದ ಬಂಟ್ವಾಳ್, ಆನಂದ ಮುಡಿಪು, ಕುಮಾರಸ್ವಾಮಿ ಕನ್ಯಾನ, ರಾಜೇಂದ್ರ ಬಿಸಿರೋಡ್, ಸತೀಶ್ ಕುಮಾರ್ ಮತ್ತು ಹರೀಶ್ ನಾಟಿ ಅವರನ್ನು ಆಯ್ಕೆ ಮಾಡಲಾಯಿತು.
ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಲಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ iಹಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಆನಂದ ಮುಡಿಪು ಆಯ್ಕೆ ಪ್ರಕ್ರಿಯೆ ನಡೆಸಿದರು. ಈ ಸಂದರ್ಭ ಜಿಲ್ಲಾದ್ಯಕ್ಷ ಜಗನ್ನಾಥ ಶೆಟ್ಟ, ಕಾರ್‍ಯದರ್ಶಿ ಮಧು ಮಂಗಳೂರು, ಜಿಲ್ಲಾ ಸಂಚಾಲಕ ವಿಠಲ ಚೌಟ, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ್ ,ಎಸ್.ಕೆ.ಪಿ ಕೊ ಒಪರೇಟಿವ್ ಬ್ಯಾಂಕಿನ ನಿದೇರ್ಶಕರಾದ ಹರೀಶ್ ರಾವ್ , ಬಂಟ್ವಾಳ ವಲಯ ಕಾರ್‍ಯದರ್ಶಿ ಹರೀಶ್ ಕುಂದರ್ ವಲಯ ಕೊಶಾಧಿಕಾರಿ ರವಿಪ್ರಕಾಶ್ ಉಪಸ್ಥಿತರಿದ್ದರು.

ಜಾಹೀರಾತು

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.