ಕಲ್ಲಡ್ಕ

ನರಹರಿ ಸದಾಶಿವ ಪರ್ವತದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ

ನರಹರಿ ಪರ್ವತ ದೇವಸ್ಥಾನದಲ್ಲಿರುವ ಕೆರೆಗಳಲ್ಲಿ ಆಟಿ ಅಮವಾಸ್ಯೆ ತೀರ್ಥಸ್ನಾನಕ್ಕೆ ಸಹಸ್ರಾರು ಭಕ್ತರು ಆಗಮಿಸಿದರು. ಚಿತ್ರ: ಕಿಶೋರ್ ಪೆರಾಜೆ.



ಆಟಿ ಅಮವಾಸ್ಯೆಯ ವಿಶೇಷ ದಿನವಾದ ಭಾನುವಾರ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಾಣೆಮಂಗಳೂರು- ಅಮ್ಟೂರು-ಗೋಳ್ತಮಜಲು ಗ್ರಾಮಗಳ ತ್ರಿವೇಣಿ ಸಂಗಮದ ಗಡಿ ಪ್ರದೇಶವಾದ ನರಹರಿ ಪರ್ವತದಲ್ಲಿರುವ ಶ್ರೀ ನರಹರಿ ಸದಾಶಿವ ದೇವಾಲಯ ಸನ್ನಿಧಿಯಲ್ಲಿ ತೀರ್ಥಸ್ನಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ಪುಣ್ಯಸ್ನಾನಗೈದು ದೇವರ ಆಶೀರ್ವಾದ ಪಡೆದರು.


ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ಮಹಿಳೆಯರು, ಮಕ್ಕಳ ಸಹಿತ ನಿಂತ ಭಕ್ತರು, ಸದಾಶಿವನ ಸಾನಿಧ್ಯದಲ್ಲಿರುವ ಶಂಖ, ಚಕ್ರ, ಗದಾ ಮತ್ತು ಪದ್ಮದ ಆಕಾರದ ತೀರ್ಥಕೂಪದಲ್ಲಿ ತೀರ್ಥಸ್ನಾನ ನೆರವೇರಿಸಿದರು. ಹೀಗೆ ಮಾಡಿದರೆ, ಇಷ್ಟಾರ್ಥ ಸಿದ್ಧಿಸುವುದು ಎಂಬ ನಂಬಿಕೆ ಇದೆ.


ನವವಧುವರರು, ಶಿವಭಕ್ತರು ಸಾಲು ಸಾಲಾಗಿ ಪರ್ವತವೇರಿ ಪವಿತ್ರವಾದ ನಾಲ್ಕು ಕೆರೆಗಳಲ್ಲಿ ಮಿಂದು, ಎಲೆ, ಅಡಿಕೆ ಅರ್ಪಣೆ ಗೈದು ವಿನಾಯಕ, ನರಹರಿ ಸದಾಶಿವ ಹಾಗೂ ನಾಗರಾಜನಿಗೆ ವಂದಿಸಿ ನಾನಾ ಸೇವೆಗಳನ್ನು ಕೈಗೊಂಡರು.

ಜಾಹೀರಾತು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.