ವಿಶ್ವಯೋಗ ದಿನಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಯೋಗಾಸನವನ್ನು ಪ್ರದರ್ಶಿಸಿದರು.
ಯೋಗ ಪಟುಗಳಾದ ಹಿಮಾಂಶು ರಂಜನ್, ನಿಖಿಲ್ ಹಾಗೂ ಗಣೇಶ್ ನಾಯಕ್ ಸೂರ್ಯ ನಮಸ್ಕಾರ ಸಹಿತ ಚಕ್ರಾಸನ, ವೃಕ್ಷಾಸನ, ಮಯೂರಾಸನ, ಬಕಾಸನ, ಪದ್ಮಾಸನ, ಹಲಾಸನ, ವಜ್ರಾಸನ, ಗೋಮುಖಾಸನ ಮೊದಲಾದ ಆಸನಗಳನ್ನು ಪ್ರದರ್ಶಿಸಿದರು. ಯೋಗ ಸಂಬಂಧಿತ ರಸಪ್ರಶ್ನೆ, ಲೇಖನಗಳನ್ನು ಪ್ರಸ್ತುತಪಡಿಸಿದರು. ಯೋಗದಿಂದ ಹೇಗೆ ಆರೋಗ್ಯ ವೃದ್ಧಿಸುತ್ತದೆ ಎಂಬ ಕುರಿತು ಜಾಗೃತಿಮೂಡಿಸಲಾಯಿತು. ಎಲ್ಲ ವಿದ್ಯಾರ್ಥಿಗಳು, ಶಿಕ್ಷಕವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೈಹಿಕ ಶಿಕ್ಷಣ ತರಬೇತುದಾರರಾದ ಶ್ರುತಿಕಾ ಮಾರ್ಗದರ್ಶನ ನೀಡಿದರು. ಹತ್ತನೇ ತರಗತಿಯ ಯಾಶಲ್ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…