ಬಂಟ್ವಾಳ

ದಿಢೀರನೆ ಬದಲಾದ ಬಿ.ಸಿ. ROAD

ನಿರ್ಮಾಣ ಹಂತದಲ್ಲಿರುವ ಕೆಎಸ್ಆರ್ಟಿಸಿ ನೂತನ ಬಸ್ ನಿಲ್ದಾಣದ ಮುಂಭಾಗ ರಾಷ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಶುಕ್ರವಾರ ರಾತ್ರಿ ರಸ್ತೆ ವಿಭಜನೆ ಮಾಡಿದೆ. ಇದೀಗ ಫ್ಲೈಓವರ್ ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು ಗೊಂದಲಕ್ಕೆ ಕಾರಣವಾಗಿದೆ.

ಚಿತ್ರ: ಎಸ್.ಆರ್.ಬಿ.ಸಿ.ರೋಡ್

ಅಜ್ಜಿಬೆಟ್ಟು ರಸ್ತೆಯ ನಾಗರಿಕರಿಗೆ ಮತ್ತು ವಾಹನಗಳು ತಿರುವ ಪಡೆಯಲೆಂದು ಡಿವೈಡರ ಮಧ್ಯೆ ಸ್ಥಳಾವಕಾಶ ಕಲ್ಲಿಸಲಾಗಿದ್ದು, ಅದೇ ಜಾಗದ ಸುತ್ತ ಶುಕ್ರವಾರ ಸಂಜೆ ಹಠಾತ್ತನೆ ರಸ್ಥೆ ವಿಭಾಜಕ ಕೋನ್ ಗಳನ್ನು ಅಳವಡಿಸಲಾಯಿತು.  ಇದರಿಂದ ಎರಡೂ ಕಡೆಯಿಂದ ಸಂಚರಿಸುವ ವಾಹನ ಸವಾರರು ಗೊಂದಲಕ್ಕೆ ಸಿಲುಕಿ ಪರಾದಾಡಿದರು.

ಜಾಹೀರಾತು

ಮಂಗಳೂರು ಕಡೆಯಿಂದ ಬರುವಂತ ಬಸ್ , ಲಾರಿ ಸಹಿತ ಎಲ್ಕಾಲಾ ಘನವಾಹನಗಳು ಇಲ್ಲಿ ಬಲಕ್ಕೆ ತಿರುಗಿ ಮೇಲ್ಸತುವೆಯ ಮೂಲಕ ಸಂಚರಿಸುವಂತೆ ಸೂಚನಾಫಲಕ ಹಾಕಲಾಗಿದೆ. ಹಾಗೆಯೇ ಎದುರು ಕಡೆಯಿಂದ ಬರುವ ವಾಹನಗಳು ಎಡಭಾಗದಿಂದಲೇ ನೇರವಾಗಿ ತೆರಳಬೇಕು ಎಂದು ಸೂಚನಾ ಫಲಕದಲ್ಲಿ ತಿಳಿಸಲಾಗಿದೆ.

ಚಿತ್ರ: ಎಸ್.ಆರ್.ಬಿ.ಸಿ.ರೋಡ್

ಇದೀಗ ಇಲ್ಲಿ ವಾಹನ ಸವಾರರು ತಿರುವ ಪಡೆಯಲು ಮುಂದೆ ಪರದಾಟ ನಡೆಸಬೇಕು. ವಿಭಾಜಕ ಕೋನ್ ಮಧ್ಯೆ ತೂರಿಕೊಂಡು ಹೋಗಬೇಕಾಗಿದೆ. ಈ ಸಂದರ್ಭ ಮಂಗಳೂರು ಕಡೆಯಿಂದ ಬರುವ ಘನ ವಾಹನಗಳು ಬಲಕ್ಕೆ ತೆಗೆದುಕೊಳ್ಳುವ ವೇಳೆ ಅಪಾಯ ಗ್ಯಾರಂಟಿ.

ರಾತ್ರಿ ವೇಳೆಯಲ್ಲಂತು ಈ ವ್ಯವಸ್ಥೆ ಇನ್ನಷ್ಠು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗೆ ಸಂಚರಿಸುವ ಬಸ್ ಮತ್ತಿತರ ಘನ  ವಾಹನಗಳ  ಸಂಚಾರದ ಭರಾಟೆಗೆ ವಿಭಾಜಕ ಕೋನ್ ಗಳು ನೆಲಸಮವಾದರೂ ಅಚ್ಚರಿಪಡಬೇಕಾಗಿಲ್ಲ.

ಬಿ.ಸಿ.ರೋಡಿಗೆ ಅಗತ್ಯವಿಲ್ಲದ ಮೇಲ್ಸತುವೆ ನಿರ್ಮಾಣವಾದಂದಿನಿಂದ ಒಂದಲ್ಲೊಂದು ಸಮಸ್ಯೆ, ಎಡವಟ್ಟುಗಳನ್ನು ರಾಹೆ.ಪ್ರಾ.ಇಲಾಖೆ ಮೈಮೇಲೆ ಎಳೆದುಕೊಂಡಿದೆ. ಅಗತ್ಯವಾಗಿ ಅಗಬೇಕಾದ ಸರ್ವಿಸ್ ರಸ್ತೆ ದುರಸ್ಥಿಯನ್ನು ಮಾಡದ ರಾ.ಹೆ.ಪ್ರಾ.ಇದೀಗ ಮತ್ತೊಂದು ಅಪಾಯಕಾರಿ ಸನ್ನಿವೇಶವನ್ನು ಸ್ರಷ್ಟಿಸಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.