ಮಂಗಳೂರು ಮಹಾನಗರಪಾಲಿಕೆಯ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ಯು.ಪಿ. ಮಲ್ಯ ಕ್ರಾಸ್ (ಓಲ್ಡ್ ಕೆಂಟ್) ರಸ್ತೆಯ ದುರಸ್ತಿ ಕಾಮಗಾರಿಯನ್ನು ಮಾಡಲು ಉದ್ದೇಶಿಸಿದ್ದು, ಏಪ್ರಿಲ್ 15 ರಿಂದ ಮೇ. 14 ರವರೆಗೆ ಈ ರಸ್ತೆಯಲ್ಲಿ ಸಂಪೂರ್ಣ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾಮಗಾರಿ ನಡೆಯವ ಸಮಯ ಯು.ಪಿ ಮಲ್ಯ ರಸ್ತೆ ಕ್ರಾಸ್ ಕಡೆಯಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಕಡೆಗೆ ಎಲ್ಲಾ ತರಹದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೇಂದ್ರ ಮಾರುಕಟ್ಟೆ – ಕ್ಲಾಕ್ ಟವರ್ ಕಡೆಯಿಂದ ಸೆಂಟರ್ಲ್ ರೈಲು ನಿಲ್ದಾಣ, ಅತ್ತಾವರದ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಕೇಂದ್ರ ಮಾರುಕಟ್ಟೆ ರಥಬೀದಿ ಕಡೆಯಿಂದ ಬಂದು ಕೆ.ಬಿ. ಕಟ್ಟೆ ಬಳಿ ಎಡಕ್ಕೆ ತಿರುಗಿ ಹಂಪನಕಟ್ಟೆ – ಟಾಟಾ ಶೋರೂಮ್ – ಮಿಲಗ್ರೀಸ್ – ನೂರ್ ಮಸೀದಿ ರಸ್ತೆಯ ಮೂಲಕ ಸಂಚರಿಸುವುದು.
ವಾಹನಗಳು ಮುತ್ತಪ್ಪಗುಡಿ – ವೆನ್ಲಾಟಕ್ ಶವಾಗಾರ ರಸ್ತೆ ಮೂಲಕ ಹಂಪನಕಟ್ಟೆ – ಕ್ಲಾಕ್ ಟವರ್ ಕಡೆಗೆ ಸಂಚರಿಸುವುದು. ಈ ನಿರ್ಬಂಧನೆಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ. ಎಂದು ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಮಂಗಳೂರು ನಗರ ಇವರ ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…