ನಮ್ಮೂರು

ಅಣಿ ಅರದಲ ಸಿರಿ ಸಿಂಗಾರ

“ಅಣಿ ಅರದಲ ಸಿರಿ ಸಿಂಗಾರ” ಗ್ರಂಥವು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಅರ್ ಅರ್ ಸಿ ಹಾಗೂ ಕ.ಸಾ.ಪ.ಮಹಾರಾಷ್ಟ್ರ ಘಟಕದ ಜಂಟಿ ಆಶ್ರಯದಲ್ಲಿ ನಡೆದ ‘ ಅಣಿ ‘ನಿರ್ಮಾಣ ಹಾಗೂ ‘ಬಣ್ಣಗಾರಿಕೆಯ’ ಮೂರುದಿನಗಳ ಕಮ್ಮಟದ ಹುಟ್ಟುವಳಿಯಾಗಿ ಸಿದ್ಧಗೊಂಡಿದೆ.ಮುಂಬಯಿ ಸಾಹಿತ್ಯ ಬಳಗವು ಈ ಗ್ರಂಥವನ್ನು ಪ್ರಕಟಿಸಿದೆ.

ಭೂತಾರಾಧನೆಯಲ್ಲಿ ಕೋಲ,ನೇಮ,ಬಂಡಿ ಮುಂತಾದ ಆಚರಣೆಗಳಲ್ಲಿ ಪ್ರಧಾನವಾಗಿರುವ ” ಅಣಿ ” ನಿರ್ಮಾಣದ ವಿವಿಧ ಹಂತಗಳು (‘ ಸಿರಿ ‘ಕಲಾತ್ಮಕ ರಚನೆ ) ಹಾಗೂ ಬಣ್ಣಗಾರಿಕೆಯ ನ್ನು ಯಥಾಸಾಧ್ಯ ತೋರಿಸಲಾಗಿದೆ (ಬಣ್ಣದ ಚಿತ್ರ ಗಳ ಮೂಲಕ ). ಈ ಗ್ರಂಥದಲ್ಲಿ 400 ಪುಟಗಳಿವೆ. 200 ಪುಟಗಳಷ್ಟು ಬಣ್ಣದ ಪೋಟೊಗಳಿವೆ.5 ವಿಭಾಗದಲ್ಲಿ ಪೋಟೊಗಳಿವೆ – ಅಣಿ .ಅರದಲ ,ಪದ್ದೆಯಿ ,ಸಿರಿಸಿಂಗಾರ ,ಕಟಿಬಯಿರೂಪ ಎಂಬವಿಭಾಗಗಳು. ಜಾನಪದ – ವೈದಿಕ ವಿದ್ವಾಂಸರ ಲೇಖನಗಳಿವೆ.ಬ್ರಾಹ್ಮಣ ಭೂತಗಳು ,ಮುಸ್ಲಿಂ ಭೂತಗಳು ,ಕುಲೆಭೂತಗಳು ,ಕನ್ನಡಭೂತಗಳು ಮುಂತಾದ ವಿವರಗಳಿವೆ. 10 ಮಂದಿ ಹಿರಿಯ – ಕಿರಿಯ  ಕಲಾವಿದರೊಂದಿಗೆ ನಡೆಸಿದ ಸಂವಾದವಿದೆ. 1435 ಭೂತ (ದೈವ )ಗಳ ಹೆಸರಿನ ಪಟ್ಟಿಯಿದೆ. 200 ಪಾರಿಭಾಷಿಕ ಶಬ್ದಗಳ ದಾಖಲೀಕರಣವಿದೆ.

ಜಾಹೀರಾತು

ಎಚ್ ಬಿ ಎಲ್ ರಾವ್ – ಪ್ರಧಾನ ಸಂಪಾದಕರು. .ಸಂಪಾದಕರು – ಕೆ.ಎಲ್.ಕುಂಡಂತಾಯರು.

ಬೆಲೆ – ರೂ. 1000/-.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts