ವಿಟ್ಲ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಕನ್ನಡದ ಕಲ್ಹಣ ಪ್ರಶಸ್ತಿ

 

ಚಿತ್ರ ಕೃಪೆ: bayalata.com

ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟ ಟ್ರಸ್ಟ್ ಮತ್ತು ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಬಂಟ್ವಾಳ ತಾಲೂಕು ದ. ಕ. ಆಶ್ರಯದಲ್ಲಿ ವರ್ಷಂಪ್ರತಿ ನೀಡುತ್ತಿರುವ ಕನ್ನಡದ ಕಲ್ಹಣ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನದ ಅರ್ಥಧಾರಿ, ಪ್ರವಚನಕಾರ, ನಿವೃತ್ತ ಶಿಕ್ಷಕ, ಗ್ರಂಥಕರ್ತ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು  ಅಧ್ಯಕ್ಷ ಬಿ. ತಮ್ಮಯ್ಯ, ಕೋಶಾಧಿಕಾರಿ ಎಸ್. ಗಂಗಾಧರ ಭಟ್ ಕೊಳಕೆ ಪ್ರಕಟಿಸಿದ್ದಾರೆ.

ಜಾಹೀರಾತು

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏ. 12ರಂದು ನಡೆಯುವ ನೀರ್ಪಾಜೆ ಜನ್ಮ ದಿನ ಕಾರ್ಯಕ್ರಮದಂದು ನೀರ್ಪಾಜೆ ಸಂಸ್ಮರಣೆ ಮತ್ತು ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯುವುದು.

೮೧ರ ಹರೆಯದ ಮೂಡಂಬೈಲು ಶಾಸ್ತ್ರಿ ಅವರು ಹಿಂದಿ ರಾಷ್ಟ್ರಭಾಷಾ ಪ್ರವೀಣ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.  ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಸಾಹಿತಿ, ಭಾಷಣಕಾರ, ಕೃಷಿಕ, ಜೇನು  ಸಾಕಣೆದಾರರಾಗಿದ್ದಾರೆ.

ಉಪನ್ಯಾಸ, ನಾಟಕ, ಸಂಶೋಧನಾ ಗ್ರಂಥ, ಜೀವನ ಚರಿತ್ರೆ,  ಬಿಡಿಲೇಖನ ಸಹಿಯ ಸುಮಾರು ಹನ್ನೊಂದರಷ್ಟು ಸಾಹಿತ್ಯಿಕ ರಚನೆಗಳನ್ನು ಮಾಡಿದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದವರು. ನಲುವತ್ತಕ್ಕೂ ಅಧಿಕ ಸಂಘಸಂಸ್ಥೆಗಳಿಂದ ಧಾರ್ಮಿಕ ಕ್ಷೇತ್ರದಿಂದ ವಿಶೇಷ ಸಮ್ಮಾನಗಳನ್ನು ಪಡೆದಿದ್ದಾರೆ.

ಅವರಿಗೆ ಮೂಡಂಬೈಲು ಶಾಸ್ತ್ರಿ 75 ಅಭಿನಂದನಾ ಗ್ರಂಥ ಸಮರ್ಪಣೆಯಾಗಿದೆ. ಕಲ್ಲಡ್ಕದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ ಸಮ್ಮಾನ ಅಲ್ಲದೆ ವಿವಿಧ ಸೇವಾ ಸಂಸ್ಥೆಗಳಿಂದ ಪುರಸ್ಕಾರ ಲಬಿಸಿದೆ. ದೂರದರ್ಶನ, ಆಕಾಶವಾಣಿ, ೨೦೧೫ರಲ್ಲಿ ಪುತ್ತೂರಿನಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಮ್ಮೇಳನದಲ್ಲಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.