ವಂಚನೆ ಪ್ರಕರಣದಲ್ಲಿ ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬೋಳಂತೂರು ಗ್ರಾಮದ ಸುರಿಬೈಲು ಬಿರುಕೋಡಿ ನಿವಾಸಿ ನಳಿನಿ(53) ಎಂಬಾಕೆಯನ್ನು ವಿಟ್ಲ ಪೊಲೀಸರು ಠಾಣೆಯ ಸಮೀಪ ಶುಕ್ರವಾರ ಬಂಧಿಸಲಾಗಿದೆ.
ಫೈನಾನ್ಸ್ ಸಂಸ್ಥೆಯನ್ನು ಸ್ಥಾಪಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಕೇಸ್ ಗಳಲ್ಲಿ ಈಕೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣವಿತ್ತು.
ಆರೋಪಿ ಪತ್ತೆ ಬಗ್ಗೆ ಡಿಎಸ್ಪಿ ರವೀಶ್ ಸಿ.ಆರ್. ಸಿಪಿಐ ಮಂಜಯ್ಯ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಸಿಬ್ಬಂದಿಗಳಾದ ಇಬ್ರಾಹಿಂ, ಪ್ರವೀಣ್, ರಕ್ಷಿತ್, ಚಿತ್ರಲೇಖ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ೫ಸಾವಿರ ರೂ ದಂಡ ವಿಧಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)