ಬಂಟ್ವಾಳ

ತಾಲೂಕು ಮಟ್ಟದ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ ಪ್ರಭು ಆಯ್ಕೆ


ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಿದ್ಧಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಫ್ರೌಡಶಾಲಾ ವಿಭಾಗದಲ್ಲಿ ಮಾ.೨೫ರಂದು ನಡೆಯಲಿರುವ ಬಂಟ್ವಾಳ ತಾಲೂಕು ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ, ತಾಲೂಕು ಪಂಚಾಯತು ಸದಸ್ಯ ಪ್ರಭಾಕರ ಪ್ರಭು ಕರ್ಪೆ ಆಯ್ಕೆಯಾಗಿದ್ದಾರೆ ಎಂದು ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ಧಕಟ್ಟೆ ಫ್ರೌಡಶಾಲಾ ಸಭಾಂಗಣದಲ್ಲಿ ನಡೆದ ಸಮ್ಮೇಳನದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಸಚಿವ ಬಿ.ರಮಾನಾಥ ರೈ ಮತ್ತು ಅರ್ಕಕೀರ್ತಿ ಇಂದ್ರ, ಪ್ರಧಾನ ಕಾರ್‍ಯದರ್ಶಿಯಾಗಿ ರಮಾನಂದ ಎನ್., ಕೋಶಾಕಾರಿಯಾಗಿ ಡಾ| ಸುದೀಪ್ ಕುಮಾರ್ ಆಯ್ಕೆಯಾಗಿದ್ದಾರೆ.
ಸಂಚಾಲಕರಾಗಿ ಎಂ. ತುಂಗಪ್ಪ ಬಂಗೇರ, ಪದ್ಮರಾಜ ಬಲ್ಲಾಳ್, ಕೆ. ರತ್ನಕುಮಾರ್ ಚೌಟ, ಕಾರ್‍ಯಧ್ಯಕ್ಷರುಗಳಾಗಿ ಸೀತಾರಾಮ ಶಾಂತಿ ಕೆ., ಸೀತಾರಾಮ ಶೆಟ್ಟಿ, ಉಪಾಧ್ಯಕ್ಷರಾಗಿ ಗುಲಾಬಿ ಶೆಟ್ಟಿ, ದಿನೇಶ ಸುಂದರ ಶಾಂತಿ,ಸತೀಶ್ ಪೂಜಾರಿ, ವಿನಯ ಡಿ. ಪೂಜಾರಿ, ಡಾ ಪ್ರಭಾಚಂದ್ರ ಜೈನ್, ಗೋಪಿನಾಥ ರೈ, ಸುರೇಶ್ ಶೆಟ್ಟಿ, ನಿತ್ಯಾನಂದ ಪೂಜಾರಿ ಕೆಂತಲೆ, ಪ್ರಪುಲ ರೈ, ರೋನಾಲ್ಡ್ ಮೋರಾಸ್, ಲೋಕಯ್ಯ ಗಾಡಿಪಲ್ಕೆ, ಹರಿಪ್ರಸಾದ್ ಶೆಟ್ಟಿ ಕುರ್ಡಾಡಿ, ಮಂದಾರತಿ ಎಸ್ ಶೆಟ್ಟಿ, ಎಮ್.ಎಚ್. ಉಸ್ಮಾನ್, ಡಾ ಕೃಷ್ಣಮೂರ್ತಿ, ಕಾರ್ಯದರ್ಶಿಗಳಾಗಿ ಸಂಜಯ್ ಬಿ.ಎಸ್, ಮಹೇಶ್ ಕುಮಾರ್ ವಿ ಕರ್ಕೇರಾ, ಮಮತಾ. ಪಿ ಹಾಗೂ ವಿವಿಧ ಸಮಿತಿಗಳಿಗೆ ಸಂಚಾಲಕರಾಗಿ ಭೋಜ ಪಾಂಡ್ಯ, ಡಾ ಯೋಗೀಶ್ ಕೈರೋಡಿ, ಗಣೇಶ್ ಶೆಟ್ಟಿ, ವಿನಯಚಂದ್ರ ಜೈನ್, ಸಬೀತಾ ಲವೀನಾ ಪಿಂಟೋ, ಸ್ಮಿತಾ ಎಮ್.ಹೆಚ್, ಪೂರ್ಣಿಮಾ ಕೆ.ವಿ., ವಾಸು ಎಂ.ಆಯ್ಕೆಯಾಗಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.