www.bantwalnews.com
Pic: Shamsheer Budoli
ಕಡೇಶಿವಾಲಯ – ಅಜಿಲಮೊಗರು ಮಧ್ಯೆ ಹರಿಯುವ ನೇತ್ರಾವತಿ ನದಿಗೆ ಸೇತುವೆಯೊಂದನ್ನು ನಿರ್ಮಿಸುವ ಪ್ರಸ್ತಾಪ ಹಳೇಯದ್ದು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಈ ಬೇಡಿಕೆಗೆ ಸ್ಪಂದಿಸಿದ್ದಾರೆ. 31 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಕುರಿತು ಬಂಟ್ವಾಳನ್ಯೂಸ್ ನಲ್ಲಿದೆ ಮಾಹಿತಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ಬಲದಂಡೆಯಲ್ಲಿ ಮಣಿನಾಲ್ಕೂರು ಗ್ರಾಮದಲ್ಲಿ ಅಜಿಲಮೊಗರು ಮಸೀದಿ ಇದೆ. ಎಡದಂಡೆಯಲ್ಲಿ ಕಡೇಶಿವಾಲಯ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವಿದೆ. ಇದರ ನಡುವೆ ಹರಿಯುವ ನೇತ್ರಾವತಿ ನದಿ ಪಾತ್ರವು ಸಂಪರ್ಕರಹಿತವಾಗಿದೆ. ಅಜಿಲಮೊಗರು ಮಸೀದಿ ಹಾಗೂ ಕಡೇಶಿವಾಲಯ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನವು ಪುರಾತನ ಕಾಲದಿಂದಲೂ ಪ್ರಸಿದ್ಧಿಯನ್ನು ಹೊಂದಿರುವ ಧಾರ್ಮಿಕ ಕೇಂದ್ರಗಳಾಗಿವೆ. ಈಗಲೂ ಹಲವು ಜಿಲ್ಲೆಗಳಿಂದ ಭಕ್ತರು ಈ ಎರಡೂ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಸುಮಾರು 700 ಕ್ಕೂ ಅಕ ವರ್ಷಗಳ ಇತಿಹಾಸವಿರುವ ಅಜಿಲಮೊಗರು ಮಾಲಿದಾ ಹರಕೆ ಆಚರಣೆಗೆ ಬೇರೆ ಬೇರೆ ರಾಜ್ಯಗಳಿಂದ ಜನರು ಬರುತ್ತಾರೆ. ಮೊಗರ್ನಾಡು ಮಾಗಣೆಗೆ ಸೇರಿದ ಕಡೇಶಿವಾಲಯ ನರಸಿಂಹ ಕ್ಷೇತ್ರವೆಂದು ಪ್ರಸಿದ್ಧ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಕ್ಷೇತ್ರವಾದ ಉಪ್ಪಿನಂಗಡಿಯಲ್ಲಿ ಸಹಸ್ರಲಿಂಗೇಶ್ವರನೂ ನರಸಿಂಹ ಸ್ವಾಮಿಯೂ ಜೊತೆಯಾರುವರು ಎಂದು ಕ್ಷೇತ್ರಪುರಾಣ ಹೇಳುತ್ತದೆ.
ಇಲ್ಲಿಗೆ ಅಡ್ಡಲಾಗಿ ದ್ವಿಪಥ ಸೇತುವೆಯೊಂದು 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. 350 ಮೀಟರ್ ಉದ್ದದ ಈ ಸೇತುವೆಯನ್ನು ಕೆಆರ್ ಡಿಸಿಎಲ್ ನವರು ನಿರ್ಮಿಸುವರು. ಎರಡು ಧಾರ್ಮಿಕ ಕೇಂದ್ರಗಳನ್ನು ಬೆಸೆಯಲು ಸಹಕಾರಿ. ಸರಪಾಡಿ ಭಾಗವನ್ನು ಪುತ್ತೂರು ತಾಲೂಕಿಗೆ ನಿಕಟವಾಗಿಸುವ ಅವಕಾಶ ಈ ಸೇತುವೆಗೆ ಇದೆ. ಹೀಗಾಗಿ ಅಜಿಲಮೊಗರು ಮತ್ತು ಕಡೇಶಿವಾಲಯ ಬೆಸೆಯುವ ಸೇತುವೆಗೆ ದಶಕಗಳಿಂದಲೇ ಬೇಡಿಕೆ ಇತ್ತು. ಈಗ ಅದು ಈಡೇರುವ ಹಂತಕ್ಕೆ ಬಂದಿದೆ.
ಈ ಕುರಿತು ಲೋಕೋಪಯೋಗಿ ಇಲಾಖೆ ಕಾಮಗಾರಿಯ ರೇಖಾ ಅಂದಾಜುಪಟ್ಟಿಯನ್ನು ಕೆಆರ್ ಡಿಸಿಎಲ್ ಗೆ ಸಲ್ಲಿಸಿದೆ. ಇನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಈ ಸೇತುವೆಯನ್ನು ನಿರ್ಮಿಸಬೇಕು. ಸುಮಾರು 350 ಮೀ ಅಗಲದ ಸೇತುವೆ ಇದಾಗಲಿದೆ. ನದಿಗೆ ಅಡ್ಡಲಾಗಿ ದ್ವಿಪಥ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಸರಿಸುಮಾರು ಬಿ.ಸಿ.ರೋಡ್-ಪಾಣೆಮಂಗಳೂರು ಸೇತುವೆಯಂತೆ ಕಾಣಿಸಬಹುದು. ನದಿಯ ತಳಭಾಗದಿಂದ ಸುಮಾರು 10 ಮೀಟರ್ ಎತ್ತರಕ್ಕೆ ನಿರ್ಮಿಸಿದರೆ ಸೇತುವೆ ಗಟ್ಟಿಯಾಗಿ ಹಲವಾರು ವರ್ಷಗಳವರೆಗೆ ಎರಡೂ ಪ್ರದೇಶವವನ್ನು ಬೆಸೆದುಕೊಂಡಿರುತ್ತದೆ.
ಸೇತುವೆಯ ಲಾಭ
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…