ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ನಲ್ಲಿರುವ ನಮ್ಮ ಆಯುರ್ವೇದ ಔಷಧಾಲಯ ಮತ್ತು ಚಿಕಿತ್ಸಾಲಯದಲ್ಲಿ ಫೆ.26ರಂದು ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಉಚಿತ ಶಿಬಿರ ನಡೆಯಲಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯುವ ಈ ಶಿಬಿರವನ್ನು ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕಾ ಉದ್ಘಾಟಿಸುವರು. ಗ್ರಾಪಂ ಸದಸ್ಯ ದುರ್ಗೇಶ್ ಶೆಟ್ಟಿ ಈ ಸಂದರ್ಭ ಉಪಸ್ಥಿತರಿರುವರು. ಗಂಟು ನೋವು, ಬೆನ್ನು ನೋವು, ಕುತ್ತಿಗೆ ನೋವು, ಕಾಲು ಪಾದದಡಿ ನೋವು ಇರುವವರು ಮೂಳೆ ಸಾಂದ್ರತಾ ತಪಾಸಣೆ ಮಾಡಿಸಿಕೊಳ್ಳಬಹುದು. ಇದರಿಂದ ಮೂಳೆ ಸವೆತ ಹಾಗೂ ಕ್ಯಾಲ್ಸಿಯಂನ ನಿಖರತೆಯನ್ನು ಪತ್ತೆಹಚ್ಚಬಹುದು. ತಪಾಸಣೆ ಉಚಿತವಾಗಿರುತ್ತದೆ ಎಂದು ನಮ್ಮ ಆಯುರ್ವೇದ ಪ್ರಕಟಣೆ ತಿಳಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)