ಬಂಟ್ವಾಳ

ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ

ಬಂಟ್ವಾಳ ಎಪಿಎಂಸಿ ಅಧ್ಯಕ್ಷರಾಗಿ ಪಾಣೆಮಂಗಳೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಕೆ.ಪದ್ಮನಾಭ ರೈ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಕಡೇಶ್ವಾಲ್ಯ ಕ್ಷೇತ್ರದಿಂದ ಆಯ್ಕೆಯಾದ ಚಂದ್ರಶೇಖರ ಪೂಜಾರಿ ಚುನಾಯಿತರಾದರು. ಇಬ್ಬರೂ ಕಾಂಗ್ರೆಸ್ ಬೆಂಬಲಿತರು.

www.bantwalnews.com report

ಜಾಹೀರಾತು

ಎಪಿಎಂಸಿಯಲ್ಲಿ ಒಟ್ಟು 13 ಚುನಾಯಿತ ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರಿದ್ದು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ವೇಳೆ ನಾಮನಿರ್ದೇಶಿತ ಸದಸ್ಯರ ಮತ ಗಣನೆಗೆ ಬರುತ್ತದೆ. ಹೀಗಾಗಿ ಈ ಬಾರಿ ನಾಮನಿರ್ದೇಶಿತರೇ ಆಯ್ಕೆಗೆ ಕಾರಣರಾದರು. 13 ಸದಸ್ಯರ ಪೈಕಿ ಬಿಜೆಪಿ 7 ಹಾಗೂ ಕಾಂಗ್ರೆಸ್ 6 ಬೆಂಬಲಿತರನ್ನು ಹೊಂದಿತ್ತು. ಆದರೆ ಮೂವರು ನಾಮನಿರ್ದೇಶಿತರ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾದರು.

ನಡೆದ ಚುನಾವಣೆ:

ಬಿಜೆಪಿ ಸದಸ್ಯರಾದ ನೇಮಿರಾಜ ರೈ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಗೀತಾಲತಾ ಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದರೆ, ಕಾಂಗ್ರೆಸ್ ನಿಂದ ಪದ್ಮನಾಭ ರೈ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಚಂದ್ರಶೇಖರ ಪೂಜಾರಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಹಿಂತೆಗೆಯದ ಕಾರಣ ಚುನಾವಣೆ ಮತದಾನದ ಮೂಲಕ ನಡೆಯಿತು.

ಪದ್ಮನಾಭ ರೈ ಮತ್ತು ಚಂದ್ರಶೇಖರ ಪೂಜಾರಿ ತಲಾ 9 ಮತಗಳನ್ನು ಗಳಿಸಿ ಆಯ್ಕೆಯಾದರೆ, ನೇಮಿರಾಜ ರೈ ಮತ್ತು ಗೀತಾಲತಾ ಶೆಟ್ಟಿ ಅವರಿಗೆ 7 ಮತಗಳು ಲಭಿಸಿದವು.

ತಹಶೀಲ್ದಾರ್ ಕೆ.ಪುರಂದರ ಹೆಗ್ಡೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭ ಎಪಿಎಂಸಿ ಕಾರ್ಯದರ್ಶಿ ಭಾರತಿ ಪಿ.ಎಸ್ ಉಪಸ್ಥಿತರಿದ್ದರು. ಬಂಟ್ವಾಳ ಠಾಣಾ ಎಸ್ ಐ ನಂದಕುಮಾರ್ ಬಂದೋಬಸ್ತ್ ಏರ್ಪಡಿಸಿದ್ದರು.

ಅಭಿನಂದನೆ:

ಚುನಾವಣಾ ಆಯ್ಕೆ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪದ್ಮನಾಭ ರೈ, ಅನುಭವದ ಹಾಗೂ ಸರಕಾರದ ನೆರವು ಪಡೆದು ಆಡಳಿತ ನಡೆಸುವ ಭರವಸೆ ನೀಡಿದರು. ಈ ಸಂದರ್ಭ ಅವರನ್ನು ಸಭಾಂಗಣದ ಹೊರಗೆ ಸೇರಿದ್ದ ಕಾಂಗ್ರೆಸ್ ನಾಯಕರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಅಬ್ಬಾಸ್ ಆಲಿ ಸಹಿತ ಪಕ್ಷ ಪ್ರಮುಖರು ಅಭಿನಂದನೆ ಸಲ್ಲಿಸಿದರು.

ಬಂಟ್ವಾಳ ಎಪಿಎಂಸಿಯ ಸದಸ್ಯರಿವರು.

1. ಸಂಗಬೆಟ್ಟು (ಸಾಮಾನ್ಯ ಕ್ಷೇತ್ರ) ಪದ್ಮರಾಜ ಬಲ್ಲಾಳ ಮಾವಂತೂರು (ಕಾಂಗ್ರೆಸ್ ಬೆಂಬಲಿತರು)

  1. ಚನ್ನೈತೋಡಿ (ಸಾಮಾನ್ಯ ಮಹಿಳೆ), ಭಾರತಿ ಎಸ್. ರೈ ಪಡಂತರಕೋಡಿ (ಕಾಂಗ್ರೆಸ್ ಬೆಂಬಲಿತರು)
  2. ಅಮ್ಟಾಡಿ (ಹಿ.ವ.ಅ) ದಿವಾಕರ ಪಂಬದಬೆಟ್ಟು (ಕಾಂಗ್ರೆಸ್ ಬೆಂಬಲಿತರು)
  3. ಕಾವಳಮೂಡೂರು (ಸಾಮಾನ್ಯ) ಅಭ್ಯರ್ಥಿಗಳು: ಹರಿಶ್ಚಂದ್ರ ಪೂಜಾರಿ ಕಜೆಕಾರು. (ಬಿಜೆಪಿ ಬೆಂಬಲಿತ)
  4. ಕೊಳ್ನಾಡು (ಹಿ.ವ.ಬಿ) ಬಿ.ಚಂದ್ರಶೇಖರ ರೈ, (ಕಾಂಗ್ರೆಸ್ ಬೆಂಬಲಿತರು)
  5. ಅಳಕೆ(ಹಿ.ವ.ಬಿ.ಮಹಿಳೆ) ಗೀತಾಲತಾ ಟಿ.ಶೆಟ್ಟಿ, (ಬಿಜೆಪಿ ಬೆಂಬಲಿತ)
  6. ಕೆದಿಲ(ಅನುಸೂಚಿತ ಪಂಗಡ) ಜಗದೀಶ ಡಿ, (ಬಿಜೆಪಿ ಬೆಂಬಲಿತ)
  7. ಮಾಣಿ(ಸಾಮಾನ್ಯ) ಬಿ.ನೇಮಿರಾಜ ರೈ, (ಬಿಜೆಪಿ ಬೆಂಬಲಿತ)
  8. ಕಡೇಶ್ವಾಲ್ಯ (ಸಾಮಾನ್ಯ) ಚಂದ್ರಶೇಖರ ಪೂಜಾರಿ (ಕಾಂಗ್ರೆಸ್ ಬೆಂಬಲಿತರು)
  9. ಪಾಣೆಮಂಗಳೂರು (ಸಾಮಾನ್ಯ), ಕೆ. ಪದ್ಮನಾಭ ರೈ. (ಕಾಂಗ್ರೆಸ್ ಬೆಂಬಲಿತರು)
  10. ತುಂಬೆ (ಅನುಸೂಚಿತ ಜಾತಿ, ಅಭ್ಯರ್ಥಿಗಳು: ವಿಠಲ ಸಾಲ್ಯಾನ್. (ಬಿಜೆಪಿ ಬೆಂಬಲಿತ)
  11. ವರ್ತಕರ ಕ್ಷೇತ್ರ – : ಬಾಲಕೃಷ್ಣ ಆಳ್ವ. (ಬಿಜೆಪಿ ಬೆಂಬಲಿತ)
  12. ಸಹಕಾರಿ ಕ್ಷೇತ್ರಕ್ಕೆ – ರವೀಂದ್ರ ಕಂಬಳಿ (ಬಿಜೆಪಿ ಬೆಂಬಲಿತ)
  13. ನಾಮನಿರ್ದೇಶಿತ –  ಅಬ್ದುಲ್ ಲತೀಫ್
  14. ನಾಮನಿರ್ದೇಶಿತ –  ಕಾಂಚಲಾಕ್ಷಿ
  15. ನಾಮನಿರ್ದೇಶಿತ –  ಆಲ್ಫೋನ್ಸ್ ಮಿನೇಜಸ್
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.