ವಿಟ್ಲ

ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಬ್ರದರ್ಸ್ ಕಂದೇಲು ಪ್ರಥಮ, ಆಳ್ವಾಸ್ ದ್ವಿತೀಯ

ಜಯಕರ್ನಾಟಕ ಉಕ್ಕುಡ ಘಟಕ ಹಾಗೂ ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹೊನಲು ಬೆಳಕಿನ ಪ್ರೋ ಮಾದರಿಯ ಅಂತರ್ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಬ್ರದರ್‍ಸ್ ಕಂದೇಲ್ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಆಳ್ವಾಸ್ ಮೂಡಬಿದಿರೆ ದ್ವಿತೀಯ, ಅರಬ್ ರೈಡರ್‍ಸ್ ತೂಮಿನಾಡ್ ತೃತೀಯ ಸ್ಥಾನ, ಎಸ್‌ಡಿಎಂ ಉಜಿರೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಜಾಹೀರಾತು

ಈ ಸಂದರ್ಭ ಮಾತನಾಡಿದ ಕರ್ನಾಟಕ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ರವಿಕಿರಣ್ ಪುಣಚ ಕೂಡಾಕೂಟಗಳಿಂದ ದೇಶದ ಸೌಹಾರ್ಧತೆ ಉಳಿಯಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಈ ದೇಶದಲ್ಲಿ ಬಹುತೇಕ ಕ್ರೀಡೆಗಳು ಹೊರದೇಶದಿಂದ ಬಂದಿದ್ದಾಗಿದೆ. ಕಬಡ್ಡಿ ಮಾತ್ರ ಇಲ್ಲಿಯ ಮಣ್ಣಿನ ಆಟವಾಗಿದೆ. ಕಬ್ಬಡಿ ಕ್ರೀಡೆಗಳ ಮೂಲಕ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.

ಕರಾಟೆಯಲ್ಲಿ ಸಾಧ್ಯನೆಗೈದ ವಿದ್ಯಾರ್ಥಿಗಳಾದ ಮಹಮ್ಮದ್ ರಮೀಶ್, ಮಹಮ್ಮದ್ ಅಸ್ಲಂ, ಮಹಮ್ಮದ್ ಬಾಸಿಲ್, ಆಹಮ್ಮದ್ ನುಹ್‌ಮಾನ್ ಹಾಗೂ ನಿವೃತ್ತ ಯೋಧ ಸತೀಶ್ ಉಕ್ಕುಡ ಅವರನ್ನು ಸನ್ಮಾನಿಸಲಾಯಿತು.

ಯು.ಪಿ ಜಯರಾಮ ಉಕ್ಕುಡ, ರಹೀಂಶಾನ್ ಅಳಿಕೆ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಮನೋಜ್ ಪಿ, ರಮಾನಾಥ ವಿಟ್ಲ, ರಮೇಶ, ಜಯಪ್ರಕಾಶ್, ರಮೇಶ ಉಕ್ಕುಡ, ಹಮೀದ್ ಕೆಜಿಎನ್, ಕೆ ಇಸ್ಮಾಯಿಲ್, ಶರೀಫ್ ಯು, ರಂಜೀತ್ ಕುಮಾರ್, ಅಬ್ದುಲ್ ರಝಾಕ್, ರವಿ ಬಂಗೇರ, ಹಮೀದ್ ಟಿಎಚ್‌ಎಂಎ, ಹಮೀದ್ ಕೆ.ಎಸ್, ರಾಝೀಕ್ ಉಕ್ಕುಡ ಮೊದಲಾದವರು ಉಪಸ್ಥಿತರಿದ್ದರು.

ರಶೀದ್ ಉಕ್ಕುಡ ಸ್ವಾಗತಿಸಿದರು. ಹಮೀದ್ ಗೋಳ್ತಮಜಲು ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts