ಬಂಟ್ವಾಳ

ತಾಜುಲ್ ಉಲಮಾ ಅನುಸ್ಮರಣೆ 11ರಂದು

ಫಖ್ರುದ್ದೀನ್ ಜುಮ್ಮಾ ಮಸ್ಜಿದ್ ಮಾವಿನಕಟ್ಟೆ ಅಜಿಲಮೊಗರುವಿನಲ್ಲಿ ಎಸ್.ವೈ.ಎಸ್, ಎಸ್.ಎಸ್.ಎಫ್. ಮಾವಿನಕಟ್ಟೆ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ 11ರಂದು ಸಂಜೆ 6 ಕ್ಕೆ ಮಾವಿನಕಟ್ಟೆ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.

www.bantwalnews.com report

ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಎಸ್.ಎಸ್.ಎಫ್. ಬಂಟ್ವಾಳ ಡಿವಿಜನ್ ಅಧ್ಯಕ್ಷ ಅಬ್ದುಲ್ ರಶೀದ್ ವಗ್ಗ, ಈ ಸಂದರ್ಭ ಮುಖ್ಯ ಭಾಷಣಕಾರರಾಗಿ ಸಿರಾಜುಲ್ ಹುದಾ ಕುಟ್ಯಾಡಿಯ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಸಯ್ಯಿದ್ ಹಂಝ ತಂಞಳ್ ಕರ್ಪಾಡಿ ಆಶೀರ್ವಚನ ನೀಡಲಿದ್ದು, ಸಭೆಯ ಅಧ್ಯಕ್ಷತೆಯನ್ನು ಮಾಜಿ ಖತೀಬರಾದ ಅಬ್ದುಲ್ ಹಮೀದ್ ಮದನಿ. ಕಾರ್ಯಕ್ರಮವನ್ನು ಎಎಂಇಸಿ ಮಾಡಡ್ಕ ಮ್ಯಾನೇಜರ್ ಕೆ.ಎ.ಅಶ್ರಫ್ ಸಖಾಫಿ ಮಾಡಾವು ಉದ್ಘಾಟಿಸುವರು. ಖಾದಿಸಿಯ ಇಸ್ಲಾಮಿಕ್ ಮತ್ತು ವಿಜ್ಞಾನ ಅಕಾಡಮಿ ಕಾವಳಕಟ್ಟೆಯ ಪ್ರಾಂಶುಪಾಲ ಹಾಫಿಲ್ ಸುಫಿಯಾನ್ ಸಖಾಫಿ ಮತ್ತು ಮಲ್ಲೂರು ಅಲ್ ಅಸಾಸ್ ಅಧ್ಯಕ್ಷ ಎಂಪಿಎಂ ಅಶ್ರಫ್ ಸಅದಿ ಭಾಷಣಗೈಯುವರು. ಈ ಸಂದರ್ಭ ಮಾಜಿ ಖತೀಬ ಅಬ್ದುಲ್ ಹಮೀದ್ ಮದನಿ ಗೌರವಾರ್ಪಣೆ ನಡೆಯಲಿದೆ ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಯಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸ್ಥಳ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಫ್ ಜೆಎಂ ಮಾವಿನಕಟ್ಟೆ ಖತೀಬ ಅಬ್ದುಲ್ ಜಬ್ಬಾರ್ ಸಅದಿ, ಎಸ್ ಎಸ್‌ಎಫ್ ಮಾವಿನಕಟ್ಟೆ ಅಧ್ಯಕ್ಷ ಮಹಮ್ಮದ್ ಶರೀಫ್, ಎಸ್ ವೈಎಸ್ ಮಾವಿನಕಟ್ಟೆ ಅಧ್ಯಕ್ಷ ಹುಸೈನ್ ಎಚ್, ಮಾವಿನಕಟ್ಟೆ ಸ್ವಲಾತ್ ಕಮಿಟಿ ಅಧ್ಯಕ್ಷ ಅಬ್ಬಾಸ್ ಕೆ, ಎಫ್ ಜೆಎಂ ಮಾವಿನಕಟ್ಟೆ ಅಧ್ಯಕ್ಷ ಅಬ್ಬಾಸ್ ಅಂತಾರ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.