ಬಂಟ್ವಾಳ

ಕುಡಿಯುವ ನೀರಿನ ರೇಚಕ ಸ್ಥಾವರದಲ್ಲಿ ನೀರು ಪೋಲು

www.bantwalnews.com report

ಭಾನುವಾರ ಸಂಜೆ ಗೂಡಿನಬಳಿ ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರು ತುಂಬಿ ಸ್ಥಾವರದ ಸುತ್ತಲೂ ತೂತಿನ ಮೂಲಕ ಧಾರಾಕಾರವಾಗಿ ಹೊರ ಚೆಲ್ಲುತ್ತಿದ್ದ ದೃಶ್ಯಗಳು ಕಂಡುಬಂದವು.

ಜಾಹೀರಾತು

ಈ ಸ್ಥಾವರದ ಪಕ್ಕದಲ್ಲೇ ಇರುವ ರೋಟರಿ ಕ್ಲಬ್‌ಗೆ ರೋಟರಿ ಗವರ್ನರ್ ಡಾ. ಆರ್.ಎಸ್.ನಾಗಾರ್ಜುನ ಅವರ ಭೇಟಿ ಕಾರ್ಯಕ್ರಮ ನಡೆದಿದ್ದು ಸ್ಥಳೀಯ ಸುದ್ದಿಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತೆರಳಿದಾಗ ಸ್ಥಾವರದಿಂದ ನೀರು ಹೊರ ಚೆಲ್ಲುತ್ತಿರುವುದು ಕಂಡು ಬಂತು. ಇದು ಸಾಮಾನ್ಯ ದೃಶ್ಯ ಎಂದು ಸ್ಥಳೀಯರು ಸುದ್ದಿಗಾರರಿಗೆ ತಿಳಿಸಿದರು.

ಕೆಲವು ಹೊತ್ತಿನ ಬಳಿಕ ಇಲ್ಲಿನ ಸಿಬ್ಬಂದಿಯೊಬ್ಬರು ಧಾವಿಸಿ ಬಂದು ಪಂಪ್‌ನ ಸ್ವಿಚ್ ಆಫ್ ಮಾಡಿದಾಗ ಸೋರಿಕೆ ನಿಂತಿತು.

ಬಿ.ಸಿ.ರೋಡ್ ಭಾಗಕ್ಕೆ ನೀರು ಪೂರೈಕೆಯ ಗೇಟ್‌ವಾಲ್ ತೆರೆಯಲೆಂದು ತಾನು ತೆರಳಿದ್ದು ಆ ಸಂದರ್ಭ ಇಲ್ಲಿ ವಿದ್ಯುತ್ ಕಡಿತಗೊಂಡಿತ್ತು. ವಿದ್ಯುತ್ ಬಂದು ನೀರು ತುಂಬಿ ಹೊರ ಚೆಲ್ಲಿದೆ. ಎರಡನೆ ಹಂತದ ಕಾಮಗಾರಿಯ ಪೈಪ್ ಅಳವಡಿಕೆಯ ಸಂದರ್ಭ ಸ್ಥಾವರದ ಅಲ್ಲಲ್ಲಿ ತೂತುಗಳಾಗಿವೆ. ಇದರಿಂದಾಗಿ ನೀರು ಹೊರ ಚೆಲ್ಲುತ್ತಿವೆ ಎಂದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.