ಜಿಲ್ಲಾ ಸುದ್ದಿ

ಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವು

ಕರಿಮೆಣಸು ಕೊಯ್ಯಲು ಹತ್ತಲು ಬಳಸಿದ ಕಬ್ಬಿಣದ ಏಣಿ ವಿದ್ಯುತ್ ವಯರಿಗೆ ತಗಲಿ ವಿದ್ಯುತ್ ಪ್ರವಹಿಸಿ, ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

www.bantwalnews.com report

ಜಾಹೀರಾತು

ಭಾನುವಾರ ಮಂಗಳೂರಿನ ಉಜ್ಜೋಡಿ ಎಂಬಲ್ಲಿ ಈ ಘಟನೆ ನಡೆದಿದೆ.  ವಲೇರಿಯನ್ ಲೋಬೊ (55), ಹಾಸ್ಮೀ ಲೋಬೊ (51) ಮತ್ತು ಸಂದೀಪ್ (28).ಮೃತಪಟ್ಟವರು.

ವಲೇರಿಯನ್ ಲೋಬೊ ಎನ್.ಎಂ.ಪಿ.ಟಿ.ಯಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರೆ, ಹಾಸ್ಮೀ ಲೋಬೊ ರೋಷನಿ ನಿಲಯದಲ್ಲಿ ಉದ್ಯೋಗಿ. ಇವರು ಪಕ್ಕದಲ್ಲೇ ಹೋಟೆಲ್ ಒಂದರಲ್ಲಿ ಕೆಲಸ ಮಾಡುವ ಸಂದೀಪ್ ಎಂಬಾತನನ್ನು ಕರಿಮೆಣಸು ಕೊಯ್ಯಲು ಕರೆದಿದ್ದರು. ಮನೆಯ ಆವರಣದಲ್ಲೇ ಇದ್ದ ಕರಿಮೆಣಸು ಬಳ್ಳಿಯಲ್ಲಿದ್ದ ಕಾಳುಮೆಣಸನ್ನು ಕೊಯ್ಯಲು ಕಬ್ಬಿಣದ ಏಣಿಯನ್ನು ಉಪಯೋಗಿಸಿ ಸಂದೀಪ್ ಹತ್ತಿದ. ಆದರೆ ದಿಢೀರನೆ ಏಣಿ ಜಾರಿ ಅಲ್ಲೇ ಹಾದು ಹೋಗುತ್ತಿದ್ದ ಹೈ ಓಲ್ಟೇಜ್ ವಯರಿಗೆ ತಾಗಿತು. ಸಂದೀಪ್ ಅಲ್ಲೇ ಸಾವನ್ನಪ್ಪಿದ. ಇದೇ ಸಂದರ್ಭ ಏಣಿಯನ್ನು ಹಿಡಿದ ವಲೇರಿಯನ್ ಅವರೂ ವಿದ್ಯುತ್ ಆಘಾತಕ್ಕೊಳಗಾದರೆ, ಅವರ ರಕ್ಷಣೇಗೆ ಬಂದ ಹಾಸ್ಮಿ ಅವರೂ ಏಣಿ ಮುಟ್ಟಿ ಮೃತಪಟ್ಟರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.