ಬಂಟ್ವಾಳ

ಆತ್ಮಶುದ್ಧೀಕರಣದ ಕೆಲಸ ಅಗತ್ಯ: ರಮಾನಾಥ ರೈ

ಅಪನಂಬಿಕೆ, ಅವಿಶ್ವಾಸಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಆತ್ಮಶುದ್ದೀಕರಣವಾಗುವ ಕೆಲಸ ಆಗಬೇಕು, ದೇವಸ್ಥಾನದ ಬ್ರಹ್ಮಕಲಶವಾಗುವಂತೆ ಆತ್ಮದ ಬ್ರಹ್ಮಕಲಶ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದಾಲಯ ಬಿ.ಸಿ.ರೋಡು ಇದರ ಸೇವಾ ಕೇಂದ್ರದ ನೀತನ ಕಟ್ಟಡ ಶಿವಜ್ಯೋತಿ ಭವನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವರಿಷ್ಠ ರಾಜಯೋಗ ಶಿಕ್ಷಕಿ ಶಕುಂತಲಜೀ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪ್ರಗತಿಪರ ಕೃಷಿಕ ರಾಜೇಶ್‌ ನಾಕ್ ಉಳಿಪಾಡಿಗುತ್ತು, ತಹಶೀಲ್ದಾರ್ ಪುರಂದರ ಹೆಗ್ಡೆ,  ಉದ್ಯಮಿ ಐತಪ್ಪ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಜಾಹೀರಾತು

ಬಿ.ಸಿ.ರೋಡು ಕೇಂದ್ರದ ಸಂಯೋಜಕ ರಾಜಯೋಗಿ ಬ್ರ.ಕು. ಗಣಪತಿ ಭಟ್ ಸ್ವಾಗತಿಸಿದರು, ವಿಶ್ವೇಶ್ವರೀ ಈಶ್ವರೀಯ ಸಂದೇಶ ನೀಡಿದರು. ಶಾಂತಕ್ಕ ಪಯ್ಯನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಟ್ಟಡ ದಾನಿ ಸುಶೀಲ, ಬಿ.ಸಿರೋಡು ಸೇವಾಕೆಂದ್ರದ ಸಂಚಾಲಿಕೆ ಸಾವಿತ್ರಿ, ಗಣಪತಿ ಭಟ್ ಹಾಗೂ ಶಾರದಮ್ಮ ಸಿಂಧನೂರು ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.