ಯಕ್ಷಗಾನ

ಶಿಷ್ಯನ ಭಾಗವತಿಕೆಗೆ ಗುರುವಿನ ಚೆಂಡೆ

ಒಂದು ಸ್ಮರಣೀಯ ಕ್ಷಣಕ್ಕೆ ಬಂಟ್ವಾಳ ತಾಲೂಕಿನ ಗಡಿ ಭಾಗವಾದ ತಾಳ್ತಜೆ ಸಾಕ್ಷಿಯಾಯಿತು. ಶಿಷ್ಯ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗುರು ಮಾಂಬಾಡಿ ಸಾಥ್ ನೀಡಿದ್ದು ಅಪರೂಪದ ಕ್ಷಣಗಳಲ್ಲಿ ಒಂದಾಗಿ ದಾಖಲಾಯಿತು.

www.bantwalnews.com report

ಜಾಹೀರಾತು

ತಾಳ್ತಜೆ ಸುಬ್ರಾಯ ಭಟ್ ಪ್ರತಿಷ್ಠಾನದ ವತಿಯಿಂದ 2016-17ನೇ ಸಾಲಿನ ಯಕ್ಷ ಪ್ರಶಸ್ತಿ ಈ ಬಾರಿ ತೆಂಕುತಿಟ್ಟಿನ ಸ್ಟಾರ್ ಭಾಗವತ ಎಂದೇ ಖ್ಯಾತರಾದ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಮದ್ದಳೆಗಾರ ಪದ್ಮನಾಭ ಉಪಾಧ್ಯಾಯ ಅವರಿಗೆ ಪ್ರದಾನ ಮಾಡಿ ಸನ್ಮಾನಿಸಲಾಗಿತ್ತು. ಗುರುವಾರ ನಡೆದ  ಕಾರ್ಯಕ್ರಮಕ್ಕೂ ಮುನ್ನ ಕೃಷ್ಣ ಸಂಧಾನ, ಬಳಕ ಭೀಷ್ಮವಿಜಯ ತಾಳಮದ್ದಳೆ ನಡೆಯಿತು.

ಈ ಸಂದರ್ಭ ಪಟ್ಲ ಸತೀಶ ಶೆಟ್ಟಿ ಭಾಗವತಿಕೆಗೆ ಅವರ ಗುರುಗಳಾದ ಪ್ರಸಿದ್ಧ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಚೆಂಡೆ ನುಡಿಸುವ ಮೂಲಕ ಗಮನ ಸೆಳೆದರು. ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯರು ಸಹಕರಿಸಿದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ವೇದಿಕೆಯಲ್ಲಿ ಕಾರ್ಯಕ್ರಮ ನೀಡುವುದು ಇತ್ತೀಚಿನ ದಿನಗಳಲ್ಲಿ ವಿರಳ. ಹೀಗಾಗಿ ಶಿಷ್ಯ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗುರು ಮಾಂಬಾಡಿ ಸಾಥ್ ನೀಡಿದ್ದು ಅಪರೂಪದ ಕ್ಷಣಗಳಲ್ಲಿ ಒಂದಾಗಿ ದಾಖಲಾಯಿತು. ಇದು ಸೇರಿದ್ದ ಅಪಾರ ಪ್ರೇಕ್ಷಕರಿಗೂ ರಸಾನುಭೂತಿಯನ್ನು ನೀಡಿತು. ತಾಳ್ತಜೆ ಶಂಕರನಾರಾಯಣ ಭಟ್ ಕಾರ್ಯಕ್ರಮದ ಆಯೋಜಕರಾಗಿದ್ದರು.

ಈ ರಸಮಯ ಕ್ಷಣಗಳಿಗೆ ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಸಾಕ್ಷಿಯಾದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.