ಬಂಟ್ವಾಳ

ರಿದಂ ಎಸ್ ವಿಎಸ್ ಅಂತರ್ಕಾಲೇಜು ಸ್ಪರ್ಧೆ

 www.bantwalnews.com

ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಜ್ಞಾನದ ಪರಿಧಿಯನ್ನು ತಿಳಿಯಲು ಸಾಧ್ಯ ಎಂದು ಆಳ್ವಾಸ್ ಕಾಲೇಜು ಮೂಡಬಿದಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಹೇಳಿದರು.

ಜಾಹೀರಾತು

ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ರಿದಂ ಎಸ್.ವಿ.ಎಸ್ ಅಂತರ್ ಕಾಲೇಜು ಸ್ಪರ್ಧೆಗಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ 16 ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ರಿದಂ ಎಸ್.ವಿ.ಎಸ್ ಇದರ ಸಮಗ್ರ ಪ್ರಶಸ್ತಿ, ಪಾರಿತೋಷಕವನ್ನು ಉಡುಪಿಯ ಪೂರ್ಣಪ್ರಜ್ಞ್ಞ ಸಂಧ್ಯಾ ಕಾಲೇಜಿನ ತಂಡ ಪಡೆದುಕೊಂಡಿತು. ಥೀಮ್ ಬೇಸ್ಡ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಮಂಗಳೂರು ಮಹೇಶ್ ಕಾಲೇಜಿನ ತಂಡವು ಪ್ರಥಮ ಬಹುಮಾನವನ್ನು, ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಮ್ಯಾಡ್ ಎಡ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ತಂಡವು ಪ್ರಥಮ ಬಹುಮಾನವನ್ನು, ರಾಮಕುಂಜದ ರಾಮಕುಂಜೇಶ್ವರ ಕಾಲೇಜಿನ ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಸ್ಪಾಟ್ ಪೋಟೋಗ್ರಾಫಿ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಿಘ್ನೇಶ್ ಪ್ರಥಮ ಬಹುಮಾನವನ್ನು, ಪುತ್ತೂರು ವಿವೇಕಾನಂದ ಕಾಲೇಜಿನ ಸಂಕೇತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಕನ್ನಡ ಫೋಕ್ ಸಾಂಗ್ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಸೌಜನ್ಯ ಪ್ರಥಮ ಸ್ಥಾನವನ್ನು, ಕಲ್ಲಡ್ಕ ಶ್ರೀರಾಮ ಕಾಲೇಜಿನ ಕಾವ್ಯಶ್ರೀ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಹಿಸ್ಟಾರಿಕಲ್ ಕ್ಯಾರೆಕ್ಟರ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ್ಞ ಸಂಧ್ಯಾ ಕಾಲೇಜಿನ ಚಿನ್ಮಯ್ ಪ್ರಥಮ ಸ್ಥಾನವನ್ನು,ಕುಂದಾಪುರದ ಭಂಡಾರ್‌ಕರ್‍ಸ್ ಕಾಲೇಜಿನ ಸಚಿನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಗೀತಾ ರೆಸಿಟೇಷನ್ ಸ್ಪರ್ಧೆಯಲ್ಲಿ ಮೂಡಬಿದಿರೆ ಮಹಾವೀರ ಕಾಲೇಜಿನ ವಸುಧಾ ಎನ್ ರಾವ್ ಪ್ರಥಮ ಸ್ಥಾನವನ್ನು, ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪ್ರಣೀತಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಡಿಬೆಟ್ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಮೃತ್ಯುಂಜಯ ಶಾಸ್ತ್ರಿ ಮತ್ತು ಸ್ವಸ್ತಿಕ್ ಪ್ರಥಮ ಸ್ಥಾನವನ್ನು, ಕಟೀಲು ಎಸ್.ಡಿ.ಪಿ.ಟಿ ಕಾಲೇಜಿನ ರಂಜನಾ ಮತ್ತು ಅನುಜ್ಞಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಜನರಲ್ ಕ್ವಿಜ್ ಸ್ಪರ್ಧೆಯಲ್ಲಿ ಕಟೀಲು ಎಸ್.ಡಿ.ಪಿ.ಟಿ ಕಾಲೇಜಿನ ವೈಷ್ಣವಿ ಶೆಟ್ಟಿ ಮತ್ತು ರಂಜನಾ ಪ್ರಥಮ ಸ್ಥಾನವನ್ನು, ರಾಮಕುಂಜದ ರಾಮಕುಂಜೇಶ್ವರ ಕಾಲೇಜಿನ ಸ್ವರಾಜ್ ರೈ ಮತು ಪವನ್ ರೈ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.

ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಸ್ವಾಗತಿಸಿದರು. ಸ್ಪರ್ಧೆಗಳ ಸಹ ಸಂಯೋಜಕ ಡಾ. ಟಿ.ಕೆ ರವೀಂದ್ರನ್ ವಂದಿಸಿದರು. ಉಪನ್ಯಾಸಕ ಶ್ರೀ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts