ಹರಿಯುವ ನೀರಿಗೆ ಧುಮುಕಿ ಈಜಿ ದಡ ಸೇರಿದ ಮಹಾನ್ ವ್ಯಕ್ತಿ ವಿವೇಕಾನಂದರು. ಇಂತಹ ವ್ಯಕ್ತಿಯ ಚರಿತ್ರೆ, ಗುಣ, ನಾಯಕತ್ವ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಯುವ ಬ್ರಿಗೇಡ್ನ ಕಾರ್ಯಕರ್ತ ತನುಜ್ ಶೆಣೈ ಹೇಳಿದರು.
https://bantwalnews.com report
ಅವರು ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ರಾ.ಸೇ,ಯೋಜನೆ ಘಟಕ ವಿವೇಕ ಜಯಂತಿಯಂದು ಆಯೋಜಿಸಿದ ಯುವ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿದವರು. ಬರಾಕ್ ಒಬಾಮ ಭಾರತದ ಸಂಸತ್ತಿನಲ್ಲಿ ಭಾಷಣ ಮಾಡುವಾಗ ವಿವೇಕಾನಂದರು ಭಾಷಣ ಮಾಡಿದ ದೇಶದಿಂದ ಬಂದ ವ್ಯಕ್ತಿಯೆಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದಿದ್ದರು, ಆದರೆ ವಿವೇಕಾನಂದರು ಹುಟ್ಟಿದ ನಾಡಿನಲ್ಲಿ ಹುಟ್ಟಿ ನಾವುಗಳು ಧನ್ಯರು ಎಂದರು. ವೇದಿಕೆಯಲ್ಲಿ ರಾ.ಸೇ,ಯೋಜನೆ ಘಟಕಾಧಿಕಾರಿ ಉಪನ್ಯಾಸಕರಾದ ಹರೀಶ ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…