ಬಂಟ್ವಾಳ

ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಕಲ್ಲಡ್ಕ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಲ್ಲಡ್ಕ ವಲಯ, ವೀರಕಂಭ ಬೋಳಂತೂರು ಶ್ರೀ ಶಾರದಾ ಸೇವಾ ಟ್ರಸ್ಟ್ ವೀರಕಂಭ ಮತ್ತು ಜನಜಾಗೃತಿ ವೇದಿಕೆ, ಕಲ್ಲಡ್ಕ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ವೇದಮೂರ್ತಿ ನಾರಾಯಣ ಭಟ್ ಕಡಂಬಿಲ ಧಾರ್ಮಿಕ ಉಪನ್ಯಾಸ ನೀಡಿದರು.

ಜಾಹೀರಾತು

ಆತ್ಮವನ್ನು ಪರಮಾತ್ಮನಲ್ಲಿ ಜೋಡಿಸುವ ಕೆಲಸವಾಗಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಕಾರಂತ್‌ ತಿಳಿಸಿದರು.

ಕ್ಷೆ.ಧ.ಗ್ರಾ.ಯೊ.(ರಿ.) ಬಂಟ್ವಾಳದ  ಯೋಜನಾಧಿಕಾರಇ ಸುನಿತಾ ನಾಯಕ್‌ ಮಾತನಾಡಿ, ಧಾರ್ಮಿಕ ಭಾವನೆ ಮನೆ ಮನೆಗಳಲ್ಲಿ ಬೆಳೆಯ ಬೇಕು ಎಂದು ತಿಳಿಸಿದರು.

ಶ್ರೀ ಸಾಯಿ ಉಳ್ಳಾಲ್ತಿ ಮತ್ತು ಉಳ್ಳಕುಳು ಸೇವಾ ಟ್ರಸ್ಟ್ ಕೊಕ್ಕಪುಣಿ ಇಲ್ಲಿನ ಅಧ್ಯಕ್ಷ ಜಯರಾಜ್‌, ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಮಜಿ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶಿವಪ್ಪ. ಎಂ.ಕೆ. ಇವರು ಸ್ವಾಗತಿಸಿ, ಬೋಳಂತೂರು ಸೇವಾ ಪ್ರತಿನಿಧಿ ವನಿತಾ ಧನ್ಯವಾದ ನೀಡಿದರು. ವೀರಕಂಭ ಒಕ್ಕೂಟದ ಕೋಶಾಧಿಕಾರಿ ಸುನೀಲ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.