ಬಂಟ್ವಾಳ

ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಶಾಲಾ ವಾರ್ಷಿಕೋತ್ಸವ

ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಮನಾರುಲ್ ಇಸ್ಲಾಮಿಯ ಹಿ. ಪ್ರಾ. ಶಾಲೆ ಹಾಗೂ ಅಂಗನವಾಡಿ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕದ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಿ.ಹೆಚ್. ಖಾದರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ನೋಂದಾವಣಾಧಿಕಾರಿಯಾದ ಎ.ಎಂ. ಖಾನ್ ಹಿತನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಾಜಿ ಬಿ.ಹೆಚ್. ಖಾದರ್‌ರವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಸಂಚಾಲಕರಾದ ಮೊಹಮ್ಮದಾಲಿ ಎ.ಆರ್, ಅಧ್ಯಕ್ಷರಾದ ಬಿ.ಎ. ಸುಲೈಮಾನ್, ಕೋಶಾಧಿಕಾರಿಯಾದ ಮೊಹಮ್ಮದ್ ಸಾಧಿಕ್ ಬಿ.ಹೆಚ್.ಬಿ ಮತ್ತು ಸದಸ್ಯರು, ಪಿ. ಟಿ. ಎ. ಅಧ್ಯಕ್ಷರಾದ ಶಬೀರ್ ಅಹ್ಮದ್, ಉಪಾಧ್ಯಕ್ಷರಾದ ಮೊಹಮ್ಮದ್ ರಫೀಕ್, ಕೋಶಾಧಿಕಾರಿಯಾದ ಬಿ.ಎಂ. ಇಲ್ಯಾಸ್, ಕ್ರೀಡಾ ಕಾರ್ಯದರ್ಶಿಯಾದ ಬಿ.ಎಂ. ಬಶೀರ್ ಮತ್ತು ಸದಸ್ಯರು, ಜುಮ್ಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಅರಬಿ, ಅರೇಬಿಕ್ ಮದರಸದ ಸದರ್ ಅಬೂಬಕ್ಕರ್ ಸಿದ್ಧೀಕ್ ರಹ್‌ಮಾನಿ ಬಿ. ಎ. ಉಪಸ್ಥಿತರಿದ್ದರು.

ಶಾಲಾ ಕಾರ್ಯದರ್ಶಿ ಬಿ.ಎ.ಮಹಮ್ಮದ್‌ರವರು ಸ್ವಾಗತಿಸಿದರು. ತೌಹೀದ್ ಶಾಲಾ ಮುಖ್ಯೋಪಾಧ್ಯಾಯಿನಿಯಾದ ಮೆಟಿಲ್ಡಾ ಡಿಕೋಸ್ತಾ ಶಾಲಾ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು, ಕೆ.ಜಿ. ವಿಭಾಗದ ಮುಖ್ಯ ಶಿಕ್ಷಕಿ ಮಮತ ಸುವರ್ಣ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮನಾರುಲ್ ಶಾಲಾ ಮುಖ್ಯೋಪಾಧ್ಯಾಯರಾದ ರಮನಿ, ಅಂಗನವಾಡಿ ಶಿಕ್ಷಕಿ, ಭೋದಕ ಭೋದಕೇತರ ವರ್ಗ, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿಯರಾದ ನಸೀಮ್ ನೂರ್, ಮೀನಾ, ನಿಶ್ಮಿತ, ಪ್ರೀಮಾ ನಿರೂಪಿಸಿದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.