ಪೈಪ್ ಲೈನ್ ಅಳವಡಿಕೆ ಕಾಮಗಾರಿ ಹಿನ್ನೆಲೆ
ಘೋಷಿತ ಮೂರು ದಿನಗಳ ಒಟ್ಟಿಗೆ ಮತ್ತೊಂದು ದಿನ ಸೇರಿ ಶುಕ್ರವಾರದವರೆಗೆ ಬಂಟ್ವಾಳ ಪುರಸಭಾ ನಿವಾಸಿಗಳು ನೀರಿಲ್ಲದ ಸ್ಥಿತಿಯನ್ನು ಅನುಭವಿಸಿದರು.
ಕೆಯುಡಬ್ಲ್ಯೂಸಿ ಇಂಜಿನಿಯರ್ ಶೋಭಾಲಕ್ಷ್ಮೀಯವರು ಪೈಪ್ಲೈನ್ ಅಳವಡಿಕೆಯ ಸ್ಥಳದಲ್ಲಿ ನಿರಂತರ ಮೂರು ದಿನಗಳ ಕಾಲವೂ ಸ್ಥಳದಲ್ಲೇ ಉಪಸ್ಥಿತರಿದ್ದು ಪೈಪ್ ಅಳವಡಿಕೆಗೆ ಸೂಕ್ತ ಮಾರ್ಗದರ್ಶನ ನೀಡಿದರು. ಜಕ್ರಿಬೆಟ್ಟಿನಲ್ಲಿರುವ ರೇಚಕ ಸ್ಥಾವರದಿಂದ ಪೂರೈಕೆಯಾಗುವ ಪೈಪ್ಲೈನ್ನಲ್ಲಿ ಸೋರಿಕೆಯ ಪರಿಣಾಮ ಎರಡನೆ ಹಂತದ ಕುಡಿಯುವ ನೀರಿನ ಯೋಜನೆಯ ಹೊಸ ಪೈಪ್ಲೈನ್ ಅಳವಡಿಕೆಯ ಸಂದರ್ಭದಲ್ಲಿ ಸಮಸ್ಯ ಉಂಟಾಗಿ ಪುರವಾಸಿಗಳಿಗೆ ಇಲಾಖೆ ನೀಡಿದ ಗಡುವಿನ ದಿನದಂದು ನೀರು ಪೂರೈಕೆ ಸಾಧ್ಯವಾಗಿಲ್ಲ. ಇದಕ್ಕಾಗಿ ವಿಷಾದವಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ಶೋಭಾಲಕ್ಷ್ಮಿ ತಿಳಿಸಿದರು. ಶುಕ್ರವಾರ ಸಂಜೆಯ ವೇಳೆಗೆ ನಗರವಾಸಿಗಳಿಗೆ ನೀರು ಪೂರೈಸುವ ವಾಗ್ದಾನ ನೀಡಿದಂತೆ ನೀರು ಪೂರೈಕೆಯಾಗಿದೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)