ಬಂಟ್ವಾಳ

ಮದುವೆ ನೋಂದಣಿ ಅರ್ಜಿ ಸಲ್ಲಿಕೆ ಸಂದರ್ಭ ಬಿಗುವಿನ ವಾತಾವರಣ

ಹುಡುಗನ ಊರು ಬಡಗಕಜೆಕಾರು. ಹುಡುಗಿ ಮಡಿಕೇರಿಯವಳು. ಇಬ್ಬರೂ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದರು.

ಇದಕ್ಕೆ ಅವರು ಆಯ್ದುಕೊಂಡದ್ದು ಬಂಟ್ವಾಳ ಉಪನೋಂದಣಿ ಕಚೇರಿ.

ಜಾಹೀರಾತು

ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮರಳುತ್ತಿದ್ದರು. ಆದರೆ ಹಾಗಾಗಲಿಲ್ಲ. ಕಾರಣ ಇಬ್ಬರ ಧರ್ಮವೂ ಬೇರೆಯಾಗಿತ್ತು.

ಹೀಗಾಗಿ ಈ ಮದುವೆ ಕಾರ್ಯಕ್ರಮ ಮೊದಲ ಘಟ್ಟದಲ್ಲೇ ಜೋಡಿಗೆ ಅಡ್ಡಿ ಉಂಟಾಯಿತು. ಸಂಘಟನೆಯೊಂದರ ಕಾರ್ಯಕರ್ತರು ಸಬ್ ರಿಜಿಸ್ಟ್ರಾರ್ ಕಚೇರಿ ಸುತ್ತ ಜಮಾಯಿಸತೊಡಗಿದಾಗ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಸುದ್ದಿ ಹರಡಲು ಸಮಯ ಬೇಕಾಗಿರಲಿಲ್ಲ.

ಪರಿಸ್ಥಿತಿ ಬದಲಾಗುವ ಲಕ್ಷಣ ತೋರುತ್ತಿದ್ದಂತೆ ಯುವಕ ಸ್ಥಳದಿಂದ ತೆರಳಿದ. ಯುವತಿ ನೋಂದಣಿ ಕಚೇರಿಯೊಳಗೆ ಬಾಕಿಯಾದಳು.

ಈ ಸಂದರ್ಭ ಬಂಟ್ವಾಳ ಪೊಲೀಸರು ಆಗಮಿಸಿದರು. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ನಂದ ಕುಮಾರ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಬಂದೋಬಸ್ತ್ ಒದಗಿಸಿದರು.

ಆತಂಕದ ವಿಚಾರ ತಿಳಿದ ಯುವತಿಯ ಸಹೋದರ ಬಿ.ಸಿ.ರೋಡಿಗೆ ಆಗಮಿಸಿದರು. ಪೊಲೀಸರ ಜೊತೆ ಮಾತುಕತೆಯೂ ನಡೆಯಿತು. ತನ್ನ ಸಹೋದರಿ ಮತ್ತು  ಯುವಕ ಪರಸ್ಪರ ಇಷ್ಟಪಟ್ಟಿದ್ದಾರೆ, ಮನೆಮಂದಿಯ ಒಪ್ಪಿಗೆಯೂ ಇದೆ ಈ ಹಿನ್ನೆಲೆಯಲ್ಲಿ ಯುವಕನ ಜೊತೆಗೇ ತನ್ನ ಸಹೋದರಿಯನ್ನು ಮದುವೆ ಮಾಡುವುದಾಗಿ ಯುವತಿ ಸಹೋದರನೇ ಪೊಲೀಸರಿಗೆ ತಿಳಿಸಿದರು. ಹೀಗಾಗಿ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಯುವತಿ ಹಾಗೂ ಆಕೆಯ ಸಹೋದರ ಖಾಸಗಿ ಕಾರಿನಲ್ಲಿ ಮಡಿಕೇರಿಯತ್ತ ಪಯಣಿಸಿದರು. ಬಂಟ್ವಾಳ ನಗರ  ಹಾಗೂ ಗ್ರಾಮಾಂತರ ಪೊಲೀಸರು ರಕ್ಷಣೆ ಒದಗಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.