ಬಂಟ್ವಾಳ

ತುಂಬೆ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಲು ರೈತರ ಮನವಿ

ತುಂಬೆ ಡ್ಯಾಂ ಪ್ರದೇಶಕ್ಕೆ ಖುದ್ದಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಿ.

ಈ ಮನವಿಯನ್ನು ಮನಪಾ ಕಮೀಷನರ್ ಅವರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಸಲ್ಲಿಸಿದ ಸಂದರ್ಭ ನಾಳೆಯೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದರು. ಆದರೆ ಇದುವರೆಗೂ ಬಂದಿಲ್ಲ ಎಂದು ಸಮಿತಿ ಆಪಾದಿಸಿದೆ.

ಜಾಹೀರಾತು

ಪಟ್ಟಿಯಲ್ಲಿ ಇಲ್ಲದ ರೈತರ ಜಮೀನು ಕುರಿತು ನಗರಪಾಲಿಕೆ ಅಧಿಕಾರಿಗಳು ತಹಶೀಲ್ದಾರ್ ಮೂಲಕ ಕಂದಾಯ ಇಲಾಖಾಧಿಕಾರಿಗಳು ಜಂಟಿಯಾಗಿ ಪರಿಶೀಲಿಸುವುದಾಗಿ ತಿಳಿಸಿದ್ದರೂ ಶನಿವಾರದವರೆಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. 5 ಮೀ. ಎತ್ತರಕ್ಕೆ ನೀರು ನಿಲ್ಲಿಸಿ ಅಧಿಕಾರಿಗಳು ನೀರಿನ ಮಟ್ಟ ಗುರುತಿಸಿದ್ದು ಘೋಷಿಸಿದ ಪಟ್ಟಿಯಂತೆ ಸರಿಯಾಗಿದೆ ಎಂಬುದಾಗಿ ಪತ್ರಿಕೆಯೊಂದರಲ್ಲಿ ವರದಿಯಾಗಿದ್ದು ಪಟ್ಟಿಯಲ್ಲಿದ್ದವರ, ಇಲ್ಲದವರ ಜಮೀನಿಗೆ ಒಳಚರಂಡಿ ಇಲಾಖಾ ಅಥವಾ ಕಂದಾಯ-ಮನಪಾ ಅಧಿಕಾರಿಗಳು ಈ ತನಕ ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ಆಪಾದಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.