ಬಂಟ್ವಾಳ

ಚೂರಿ ಇರಿತ: ನಾಲ್ವರ ಬಂಧನ

Bantwalnews.com report

ಸೋಮವಾರ ಸಂಜೆ ಕಲ್ಪನೆ ಎಂಬಲ್ಲಿ ವಿವಾಹಕ್ಕೆ ತೆರಳಿ ಮರಳುತ್ತಿದ್ದ ಇಬ್ಬರು ಯುವಕರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು

 

 

 

 

 

ಬುಧವಾರ ಮುಂಜಾನೆ ಆರು ಗಂಟೆಗೆ ಕೊಡ್ಮಣ್ ಅಬ್ಬೆಟ್ಟು ಸರಕಾರಿ ಶಾಲೆ ಬಳಿ ದೇವದಾಸ (30), ಪ್ರಶಾಂತ್ (28), ಸತೀಶ್(30), ಉಮೇಶ್(30) ಎಂಬ ಆರೋಪಿಗಳನ್ನು ಎಸ್ಪಿ ಭೂಷಣ್ ಬೊರಸೆ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಬಿ.ಕೆ.ಮಂಜಯ್ಯ ನೇತೃತ್ವದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್ ಅಮಾನುಲ್ಲಾ, ಸಿಬಂದಿಗಳಾದ ಸಂಜೀವ ಪುರುಷ, ಲಕ್ಷ್ಮಣ ಕೆ.ಜಿ, ಪಳನಿವೇಲು, ಇಕ್ಬಾಲ್,  ಉದಯ ರೈ, ಸತೀಶ್ ವಾಸು ನಾಯ್ಕ, ವಿಜಯ ಗೌಡ ನಾಲ್ವರನ್ನು ಬಂಧಿಸಿತು.
ಬೈಕಿನಲ್ಲಿ ಬರುತ್ತಿದ್ದ ಜುನೈದ್(17) ಮತ್ತು ಸಿನಾನ್ (18) ಕಲ್ಪನೆ ತಲುಪುತ್ತಿದ್ದಂತೆ ಇನ್ನೊಂದು ಬೈಕಿನಲ್ಲಿ ಬಂದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚೂರಿಯಿಂದ ಇರಿದು ಪರಾರಿಯಾಗಿದ್ದಾಗಿ ದೂರು ನೀಡಲಾಗಿತ್ತು.

ಜುನೈದ್ ಮುಲ್ಲೂರು ಬದ್ರಿಯಾನಗರ ನಿವಾಸಿಯಾದರೆ, ಸಿನಾನ್ ಶಾಂತಿಯಂಗಡಿ ನಿವಾಸಿ. ಇಬ್ಬರೂ ಕೈಕಂಬದಲ್ಲಿ ವಿವಾಹ ಸಮಾರಂಭ ಮುಗಿಸಿ ಮರಳುತ್ತಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.