bantwalnews.com report
ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರತಿಭಾ ಪುರಸ್ಕಾರ ಶಾಲೆಯ ಅಜಿತಕುಮಾರ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ವಿಎಸ್ ಕಾಲೇಜು ಬಂಟ್ವಾಳದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಮಣಿ ರಾಮಕುಂಜ ಮಾತನಾಡಿ, ಅಗೋಚರ ಪ್ರತಿಭೆಯ ಕಣ್ಣನ್ನುತೆರೆಯಲು ಪ್ರಾರ್ಥನೆ ಬಹಳ ಮುಖ್ಯ, ಅದು ಅರಿವನ್ನು ಮೂಡಿಸುತ್ತದೆ. ಜ್ಞಾನಚಕ್ಷುವನ್ನುತೆರೆದಾಗ ಪ್ರಪಂಚವು ಗೋಚರವಾಗುತ್ತದೆ ಎಂದರು.
ಸಂಸ್ಥೆಯ ಸಂಚಾಲಕ ವಸಂತ ಮಾಧವ ಪುರಸ್ಕೃತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ನಾಗೇಶ್ ಕಲ್ಲಡ್ಕ, ಮಲ್ಲಿಕಾ ಶೆಟ್ಟಿ, ಮಹೇಶ್ವರ ಭಟ್, ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿಲಾಸಿನಿ ನಿರೂಪಿಸಿ, ವಸಂತ ಬಲ್ಲಾಳ್ ಸ್ವಾಗತಿಸಿ, ಜಯಲಕ್ಷ್ಮಿ ವಂದನಾರ್ಪಣೆಗೈದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)