ಬಂಟ್ವಾಳ

ಮಂಜಲ್ಪಾದೆಯಲ್ಲಿ ತುಳುನಾಡು ಕೃಷಿ ಕ್ರಾಂತಿ

www.bantwalnews.com ವರದಿ

ಬಂಟ್ವಾಳ ತಾಲೂಕು ಸಜಿಪಮುನ್ನೂರು ಗ್ರಾಮದ ಮಂಜಲ್ಪಾದೆಯ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ರವಿಮಂಜಲ್ಪಾದೆ, ಕುಶೇಷ ಅನ್ನಪ್ಪಾಡಿ, ಪುರಂದರ ಮಂಜಲ್ಪಾದೆ, ಯಶೋಧರ ಕೊಟ್ಟಾರಿ ಆಲಾಡಿ ಅವರ 6 ಎಕ್ರೆ  ಹಡೀಲು ಗದ್ದೆಯಲ್ಲಿಂದು ಕೃಷಿ ಕ್ರಾಂತಿ.
ಭತ್ತದ ಕೃಷಿ ಗೆ ಸೋಮವಾರ ಬೀಜ ಬಿತ್ತನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.


ತುಳುನಾಡು ಕೃಷಿಕ್ರಾಂತಿಯ ಸ್ಥಾಪಕ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಮಾರ್ಗದರ್ಶನದಲ್ಲಿ, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಆಶ್ರಯದಲ್ಲಿ ಬೀಜ ಬಿತ್ತನೆ ನಡೆಯಿತು.

ಜಾಹೀರಾತು


ರವಿ ಮಂಜಲ್ಪಾದೆಯವರು ಉಳುಮೆ ಗೈದ  ಹಡೀಲು ಗದ್ದೆಗೆ ಬೀಜ ಬಿತ್ತನೆ ಗೈದರು.  ಈಗಾಗಲೇ ಅನ್ನಪ್ಪಾಡಿ ಮಹಾಗಣಪತಿ ದೇವಸ್ಥಾನದ ಜೀಣೋದ್ಧಾರ ಕಾರ್ಯದ ಜೊತೆಗೆ ಹಡೀಲು ಗದ್ದೆಯಲ್ಲಿ ಭತ್ತದ ಕೃಷಿಯನ್ನು ಬೆಳೆಸುತ್ತಿರುವುದು ಉತ್ತಮ ಕಾರ್ಯ, ಋಷಿ ಸಂಸ್ಕೃತಿಯ ಜೊತೆಜೊತೆಗೆ ಕೃಷಿ ಸಂಸ್ಕೃತಿಯೂ ಬೆಳೆಯಬೇಕು, ಯಾವುದೇ ಜಮೀನನ್ನು ಖಾಲಿಬಿಡದೆ ಇಂಚಿಂಚು ಜಾಗದಲ್ಲೂ ಕೃಷಿ ಮಾಡುವಂತಾ ಮನೋಭಾವ ಬೆಳಸುವಂತೆ ರಾಜೇಶ್ ನಾಯ್ಕ್ ಕರೆ ನೀಡಿದರು.
ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ  ಮಾತನಾಡಿ, ರಾಜೇಶ್ ನಾಯ್ಕ್ ಅವರು ತುಳುನಾಡ ಕೃಷಿಕ್ರಾಂತಿಯ ಮೂಲಕ  ಹಡೀಲು ಜಮೀನಿನಲ್ಲಿ ಕೃಷಿ ಬೆಳೆಸುತ್ತಿರುವ ಕಾರ್ಯ ಅಭಿನಂದನೀಯ ಎಂದರು.

ಜಿಲ್ಲಾ ರೈತ ಸಂಘ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾ. ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುದೇಶ್ ಮಯ್ಯ, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ. ಇದಿನಬ್ಬ, ಮಾಜಿ ತಾ.ಪಂ. ಅಧ್ಯಕ್ಷ ಯಶವಂತ ದೇರಾಜೆ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.