ನಾಟಕ

ಕಾಪಿಕಾಡ್ – ವಿಜಯಕುಮಾರ್ ಕೊಡಿಯಾಲ್ ಬೈಲ್ ಸಮಾಗಮ

ತುಳು ನಾಟಕ ಪ್ರಿಯರಿಗೆ ಸಂತಸದ ಸುದ್ದಿ.

ಇದು ತುಳು ರಂಗಭೂಮಿಯಲ್ಲೂ ಸಂಚಲನ ಮೂಡಿಸಿರುವ ವಿಚಾರ. ಪ್ರತಿಭಾವಂತ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತು ದೇವದಾಸ ಕಾಪಿಕಾಡ್ ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಇವರಿಗೆ ವೇದಿಕೆ ಒದಗಿಸಿದ್ದು, ಕೆ.ಕೆ.ಫ್ರೆಂಡ್ಸ್ ಮಂಗಳೂರು.

ಜಾಹೀರಾತು

ಮಂಗಳೂರು ಪುರಭವನ ಹಿಂದೊಮ್ಮೆ ತುಳು ನಾಟಕ ಪ್ರದರ್ಶನಕ್ಕೆ ಸಂಬಂಧಿಸಿ ಹೌಸ್ ಫುಲ್ ಆಗುತ್ತಿತ್ತು. ಮತ್ತೆ ಅದೇ ವೈಭವಕ್ಕೆ ಮರಳಲಿದೆಯಾ? ಕಾಪಿಕಾಡ್, ಕೊಡಿಯಾಲ್ ಬೈಲ್ ಅಭಿಮಾನಿಗಳಿಗೆ ಬಿಟ್ಟ ವಿಚಾರವಿದು. ಆದರೆ ನವೆಂಬರ್ 26ರಂದು ಮಂಗಳೂರು ಪುರಭವನದಲ್ಲಿ ರಾತ್ರಿ 10.30ಕ್ಕೆ ಚಾ ಪರ್ಕ ಕಲಾವಿದರ ಅಭಿನಯದ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್ ರಚನೆ ನಿರ್ದೇಶನದಲ್ಲಿ ಕೊಡೆ ಬುಡ್ಪಾಲೆ ಎಂಬ ನಾಟಕ ಭೋಜರಾಜ ವಾಮಂಜೂರು ಸಮರ್ಥ ಅಭಿನಯದಲ್ಲಿ ಇಡೀ ಚಾಪರ್ಕ ತಂಡದಿಂದ ಮೂಡಿಬರಲಿದೆ. ಅದರೊಟ್ಟಿಗೆ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆ-ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರು ಅಭಿನಯಿಸುವ ತುಳುನಾಡ ರತ್ನ ದಿನೇಶ್ ಅತ್ತಾವರ ಸಹಿತ ಪ್ರಮುಖ ಕಲಾವಿದರ ಸಂಗಮದಲ್ಲಿ ತುಳು ವಿಭಿನ್ನ ಶೈಲಿಯ ಹಾಸ್ಯದ ಜೊತೆಗೆ ಸಂದೇಶಭರಿತ ನಾಟಕ ಕಡಲಮಗೆ ಪ್ರದರ್ಶನ.

ಇವೆಲ್ಲದರ ಜೊತೆಗೆ ಉಮೇಶ್ ಮಿಜಾರ್ ತಂಡದ ತೆಲಿಕೆದ ಗೊಂಚಲು, ನಿಶಾನ್ ರೈ ಅವರಿಂದ ಹಾಡುಗಾರಿಕೆ ಮನರಂಜಿಸಲಿದೆ.

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts