ಬಂಟ್ವಾಳ

19,20ರಂದು ರೋಟರಿ ಫೌಂಡೇಷನ್ ಸೆಮಿನಾರ್ ‘ಶತ್ಸಸಂಭ್ರಮ’

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ಆತಿಥ್ಯದಲ್ಲಿ  ನ. 19ಮತ್ತು 20ರಂದು ಬಂಟವಾಳದ ಬಂಟರ ಭವನದಲ್ಲಿ ರೋಟರಿ ಜಿಲ್ಲೆ 3181ರ 2016-17 ಸಾಲಿನ ರೋಟರಿ ಫೌಂಡೇಷನ್ ಸೆಮಿನಾರ್ ‘ಶತ್ಸಸಂಭ್ರಮ’ ನಡೆಯಲಿದೆ ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗಾ ತಿಳಿಸಿದ್ದಾರೆ.

ರೋಟರಿ ಫೌಂಡೇಷನ್ ನೂರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಶತಮಾನೋತ್ಸವ ಅಂಗವಾಗಿ ಶತ್ಸಸಂಭ್ರಮ ಮಹತ್ವ ಪಡೆದಿದೆ.

ನ. 19ರಂದು ಸಂಜೆ 6ಗಂಟೆಗೆ ಮಾಜಿ ಗವರ್ನರ್ ಜಿ. ಕೆ. ಬಾಲಕೃಷ್ಣನ್ ಸಂಭ್ರಮದ ಅಂಗವಾದ ಸೆಮಿನಾರ್ ಉದ್ಘಾಟಿಸುವರು. ಜಿಲ್ಲಾ ಗವರ್ನರ್ ನಾಗರ್ಜುನ ಸಭಾಧ್ಯಕ್ಷತೆ ವಹಿಸುವರು. ರೋಟರಿ ಜಿಲ್ಲೆ 3131ರ ಮಾಜಿ ಗವರ್ನರ್ ಮಹೇಶ್ ಕೊಟ್‌ಬಾಗಿ ಮುಖ್ಯ ಅತಿಥಿ ಹಾಗೂ ಮುಖ್ಯ ಭಾಷಣಕಾರರಾಗಿರುವರು. ಸಹಾಯಕ ಗವರ್ನರ್ ಸಂತೋಷ್ ಕುಮಾರ್ ಶೆಟ್ಟಿ ಪಾಲ್ಗೊಳ್ಳುವರು. ಜಿಲ್ಲಾ ರೋಟರಿ ಫೌಂಡೇಷನ್ ಸಂಚಾಲಕ ಕೃಷ್ಣ ಶೆಟ್ಟಿ ಮುಂದಾಳತ್ವದಲ್ಲಿ ಸಮಾವೇಶ ನಡೆಯುವುದು.

ಜಾಹೀರಾತು

ಮಾಜಿ ಗವರ್ನರ್ ಕೆ.ಪಿ. ನಾಗೇಶ್, ನಿಯೋಜಿತ ಗವರ್ನರ್ ಸುರೇಶ್ ಚೆಂಗಪ್ಪ, 2017-18 ಸಾಲಿನ ನಿಯೋಜಿತ ಗವರ್ನರ್ ರೋಹಿನಾಥ್ ಪಿ. ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.

ನ.20ರಂದು ಬೆಳಿಗ್ಗೆ 9.30ಕ್ಕೆ ಮಾಜಿ ಗವರ್ನರ್ ರವಿ ವಡ್ಲಮನಿ ಮುಖ್ಯ ಭಾಷಣ ಮಾಡುವರು. ಮಾಜಿ ಗವರ್ನರ್‌ಗಳಾದ ಅವಿನಾಶ್ ಪೊದ್ದಾರ್ ಮತ್ತು ಆರ್. ಗುರು ಮುಖ್ಯ ಅತಿಥಿಗಳಾಗಿರುವರು.

ಸಮಾವೇಶದಲ್ಲಿ ರೋಟರಿ ಪೌಂಡೇಷನ್ ವಿವಿಧ ಸಾಧನೆ, ಜಾಗತಿಕ ವಿಚಾರ ವಿವಿಧ ವಸ್ತುನಿಷ್ಠ ವಿಚಾರ ಕುರಿತು ಮುಖ್ಯ ಭಾಷಣಕಾರರು ವಿಷಯ ಮಂಡನೆ ಮಾಡುವರು. ದೇಣಿಗೆ ನೀಡಿದ ವಿವಿಧ ಕ್ಲಬ್‌ಗಳ ರೋಟರಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ರೋಟರಿ ಜಿಲ್ಲೆಯ 64 ಕ್ಲಬ್‌ಗಳ 600ಕ್ಕೂ ಅಧಿಕ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ಶತ್ಸಸಂಭ್ರಮ ಸಮಾವೇಶ ಸಮಿತಿ ಸಂಚಾಲಕ ಡಾ| ರಮೇಶಾನಂದ ಸೋಮಯಾಜಿ ಪ್ರಕಟಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

5 hours ago