ವಿಟ್ಲ: ವ್ಯಕ್ತಿಯೊಬ್ಬರಿಗೆ ಮಾರಾಕಾಯುಧದಿಂದ ಹಲವು ಪ್ರಕರಣದ ಆರೋಪಿ ಹಲ್ಲೆ ನಡೆಸಿ ತಲೆ ಗಾಯವಾದ ಘಟನೆ ವಿಟ್ಲದಲ್ಲಿ ಸೋಮವಾರ ನಡೆದಿದೆ.
ಕನ್ಯಾನ ಗ್ರಾಮದ ನಿವಾಸಿ ಸಂಗಾಂ ಮುಹಮೂದ್(37) ಎಂಬವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಹಮೂದ್ ಅವರಿಗೆ ಕರೆ ಮಾಡಿ ವಿಟ್ಲ-ಪುತ್ತೂರು ರಸ್ತೆಯ ನಿವಾಸಿ ಸಾಧಿಕ್ ಯಾನ್ ಬ್ಲೇಡ್ ಸಾಧಿಕ್ ಎಂಬಾತ ವಿಟ್ಲದ ಬಸದಿ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಮಹಮೂದ್ ಅಲ್ಲಿಗೆ ಧಾವಿಸಿದಾಗ ಆತನಲ್ಲಿ ಸಾಧಿಕ್ ಹಣ ಕೇಳಿದ್ದೆನ್ನಲಾಗಿದೆ. ನನ್ನಲ್ಲಿ ಹಣ ಇಲ್ಲ ಅಂತ ತಿಳಿಸಿದಾಗ ಸಾಧಿಕ್ ಜಗಳ ತೆಗೆದಿದ್ದಾನೆ.
ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಸಾಧಿಕ್ ತನ್ನ ಕೈಯಲ್ಲಿದ್ದ ಕಬ್ಬಿಣದ ಆಯುಧದಿಂದ ಮುಖಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾನೆ ಎಂದು ಗಾಯಾಳು ಆರೋಪಿಸಿದ್ದಾರೆ. ರಕ್ತದ ನಡುವೆ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾಧಿಕ್ ಹಾಗೂ ಇತರರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಆರೋಪಿ ಸಾಧಿಕ್ನ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೆಲವು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೆನ್ನಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…