ಪುಂಜಾಲಕಟ್ಟೆ

ಕಬಡ್ಡಿ ಯುವಕರಿಗೆ ಸ್ಫೂರ್ತಿದಾಯಕ: ಈಶ್ವರಪ್ಪ

ಬಂಟ್ವಾಳ: ಗಂಡುಗಲಿಗಳ ಕ್ರೀಡೆಯಾಗಿರುವ ಕಬಡ್ಡಿ ಯುವಕರಿಗೆ ಸ್ಫೂರ್ತಿ ನೇತೃತ್ವ ಹಾಗೂ ಪ್ರೋತ್ಸಾಹವನ್ನು ನೀಡುತ್ತದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಹೇಳಿದರು.

ಕರ್ನಾಟಕ ಅಮೆಚೂರು ಕಬಡ್ಡಿ ಎಸೋಸಿತೇಶನ್ ಇದರ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಎರಡು ದಿನಗಳ ಹೊನಲು ಬೆಳಕಿನ ರಾಜ್ಯ ಮಟ್ಟದ ಮುಕ್ತ ಹಾಗೂ ೬೦ ಕೆ.ಜಿ. ವಿಭಾಗದ ಕೋಟಿ-ಚೆನ್ನಯ ಚಿನ್ನದ ಪದಕದ ಪ್ರೊ ಕಬಡ್ಡಿ ಪ್ರಶಸ್ತಿ ಪಂದ್ಯಾಟವನ್ನು ಶನಿವಾರ ಸಂಜೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು

ಅದು ಕೂಡಾ ಕೋಟಿ-ಚೆನ್ನಯ್ಯ ಹೆಸರಲ್ಲಿ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಂಡಿರುವುದು ಇನ್ನಷ್ಟು ವಿಶೇಷವಾಗಿದೆ. ಕೋಟಿ-ಚೆನ್ನಯ್ಯ ಹಿಂದುಳಿದ ವರ್ಗದ ನಾಯಕರಲ್ಲ. ಅವರಿಬ್ಬರು ಇಡೀ ಸಮಾಜದ ನಾಯಕರಾಗಿದ್ದಾರೆ ಎಂದರು.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ,ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ ಪಂದ್ಯಾಕೂಟಕ್ಕೆ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ 20 ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಿದೆ.ಗ್ರಾಮೀಣ ಕ್ರೀಡೆಯಾಗಿಯೇ ಉಳಿದಿದ್ದ ಕಬಡ್ಡಿಗೆ ಇಂದು ರಾಷ್ಟ್ರೀಯ ಸ್ಥಾನಮಾನ ದೊರಕಿದ್ದು  ಉತ್ತುಂಗ ಮಟ್ಟಕ್ಕೇರಿದೆ.ಕಬಡ್ಡಿ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.

ಕುತ್ತಿಲ ಬ್ರಹ್ಮ ಬದರ್ಕಳ ಗರಡಿ ಮತ್ತು ಮೂಡಬೆಟ್ಟು ತಾವು ಬ್ರಹ್ಮ ಬದರ್ಕಳ ಗರಡಿಯಿಂದ ಕ್ರೀಡಾಂಗಣದವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಕ್ರೀಡಾಜ್ಯೋತಿಯಿಂದ ಈಶ್ವರಪ್ಪ ಅವರು ದೀಪ ಪ್ರಜ್ವಲಿಸಿದರು.

ಚಲನಚಿತ್ರ ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕ ಆದಿತ್ಯ ನಾರಾಯಣ ಇನ್‌ವೆಲ್ಲಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರಪ್ಪ ಅವರ ಪುತ್ರ ಕಾಂತೇಶ್,ಪ್ರಮುಖರಾದ ಜಗನ್ನಾಥ್ ಭಂಡಾರಿ, ಕಬಡ್ಡಿ ಪಂದ್ಯಾಟದ ಪೋಷಕ ಮುಂಬ ಉದ್ಯಮಿ ಸುಂದರರಾಜ್ ಹೆಗ್ಡೆ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ದ.ಕ. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜ, ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಬೆಂಗಳೂರು ಉದ್ಯಮಿ ವಸಂತ ಹೆಗ್ಡೆ ಪಾದೆಮನೆ, ವಿಜಯ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ವಸಂತ ಪೂಂಜ, ಸಂತೋಷ್ ಕುಮಾರ್ ಕಾಪಿನಡ್ಕ, ಸಹಕಾರಿ ಮುಖಂಡ ಲಕ್ಷ್ಮಿನಾರಾಯಣ ಉಡುಪ, ನಾಮ್‌ದೇವ್ ರಾವ್ ಮುಂಡಾಜೆ,ಶ್ರೀಧರ್ ಶೆಟ್ಟಿ ಭಂಡಾರಿಬೆಟ್ಟು, ಕುಂಟಜಾಲ್ ದೇವಪ್ಪ ಶೆಟ್ಟಿ, ಸದಾನಂದ ನಾವರ, ಸೀತಾರಾಮ ಹೆಗ್ಡೆ, ಸೀತಾರಾಮ ಶೆಟ್ಟಿ,ತುಳಸಿ ಹಾರ,ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ,ಪದಾಽಕಾರಿಗಳಾದ ರಾಜೇಶ್ ಪಿ.,ಜಯರಾಜ ಅತ್ತಾಜೆ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಕಬಡ್ಡಿಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಬಡ್ಡಿ ತಂಡವನ್ನು ಈಶ್ವರಪ್ಪ ಅವರು ಸಮ್ಮಾನಿಸಿದರು.

ಮಾಜಿ ಅಧ್ಯಕ್ಷ ಪ್ರಭಾಕರ್ ಪಿ.ಎಂ.ಅವರು ಸ್ವಾಗತಿಸಿದರು. ಜಿಲ್ಲಾ ಕಬಡ್ಡಿ ತೀರ್ಪುಗಾರರ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ.ಮತ್ತು ದಿವಾಕರ ಉಪ್ಪಳ ಅವರು ಕಾರ್ಯಕ್ರಮ ನಿರೂಪಿಸಿದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.