ಬಂಟ್ವಾಳ

500, 1000 ರೂ ನೋಟು ನಿಷೇಧ: ಮೊದಲ ದಿನ ಗ್ರಾಹಕರ ಪರದಾಟ

ಬಂಟ್ವಾಳ: ದೇಶದಾದ್ಯಂತ 500 ರೂ.ಮತ್ತು 1000 ರೂ.ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಗೊಂಡ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವ್ಯವಹಾರಗಳು ಬುಧವಾರ ಅಸ್ತವ್ಯಸ್ತಗೊಂಡವು.

ಮಂಗಳವಾರ ರಾತ್ರಿ ಈ ಸುದ್ದಿ ಹರಡಿದ ಕೂಡಲೇ ಈ ನೋಟುಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕಿದರೆ ವಿಷಯ ತಿಳಿಯದ ಜನರು ಚಿಲ್ಲರೆ ನೋಟಿಗಾಗಿ ಪರದಾಡುವಂತಾಯಿತು. ಬುಧವಾರ ಬೆಳಗ್ಗೆ ಜನರು ಹಾಲಿನಿಂದ ಹಿಡಿದು ಇತರ ವ್ಯವಹಾರಗಳಿಗೆ 500 ರೂ.ಮತ್ತು1 ಸಾವಿರ ರೂ.ನೋಟುಗಳನ್ನು ತಂದರೆ ಯಾರೂ ಸ್ವೀಕರಿಸಲಿಲ್ಲ. ಚಿಲ್ಲರೆ ಕೊರತೆಯಿಂದಾಗಿ ಆಟೋ ರಿಕ್ಷಾ ಚಾಲಕರೂ ತೊಂದೆ ಪಡುವಂತಾಯಿತು.

ಜಾಹೀರಾತು

ಸಹಕಾರಿ ಸಂಘಗಳ ಸಹಿತ ಬ್ಯಾಂಕ್ ವ್ಯವಹಾರ ಇಲ್ಲದಿದುದರಿಂದ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರು ವಾಪಾಸು ಹೋಗುವಂತಾಯಿತು. ಗ್ರಾಹಕರಿಗೆ ನೋಟಿನ ಬಗ್ಗೆ ಮಾಹಿತಿ ನೀಡಬೇಕಾಯಿತು.

ನೋಟು ನಿಷೇಧಿಸಿ ವಹಿವಾಟು ಸ್ಥಗಿತಹೊಳಿಸಿದ ಹಿನ್ನಲೆಯಲ್ಲಿ ವಿಟ್ಲ ಪೇಟೆ ಅಂಗಡಿ ವಹಿವಾಟುಗಳು ಅರ್ಧಕ್ಕೆ ಇಳಿದಿತ್ತು.

ರಾಷ್ಟ್ರೀಕೃತ ಬ್ಯಾಂಕ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾದರೂ ಮುಖ್ಯದ್ವಾರದಲ್ಲಿ ಬ್ಯಾಂಕ್ ವ್ಯವಹಾರ ಇರುವುದಿಲ್ಲ ಎಂಬ ಫಲಕ ಕಾಣಿಸುತ್ತಿತ್ತು. ಸಹಕಾರಿ ಸಂಸ್ಥೆಗಳು ಚೆಕ್ ಸೇರಿ ಬೇರೆ ವ್ಯವಹಾರಗಳನ್ನು ಮುಂದುವರಿಸಿದ್ದರು. ಎಟಿಎಂ ಗಳು ಮುಚ್ಚಿದ್ದುದರಿಂದ ಹಲವರು ಸಮಸ್ಯೆಗೆ ಒಳಗಾಗಬೇಕಾಯಿತು. ಪೆಂಟ್ರೋಲ್ ಪಂಪ್ ಗಳಲ್ಲಿ ನಿತ್ಯಕ್ಕಿಂತ ಅಧಿಕವಾಹನಗಳು ಆಗಮಿಸಿ ಚಿಲ್ಲರೆ ಪಡೆದುಕೊಳ್ಳಲು ಯತ್ನಿಸುತ್ತಿದ್ದರು.

 

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts