ವಿಟ್ಲ

ಬ್ಯಾಂಕುಗಳತ್ತ ಹಣದ ಮೊತ್ತ

ಬಂಟ್ವಾಳ: ನರೇಂದ್ರ ಮೋದಿ ಅವರ ನೋಟು ಬದಲಾವಣೆ ನೀತಿ ಪರಿಣಾಮ, ನಿತ್ಯದ ವ್ಯವಹಾರಕ್ಕಿಂತ ಅಧಿಕ ಠೇವಣಾತಿ ಗುರುವಾರ ವಿತ್ತೀಯ ಸಂಸ್ಥೆಗಳಲ್ಲಿ ಕಂಡುಬಂತು.

ವಿಟ್ಲ ಅಂಚೆ ಕಛೇರಿಯಲ್ಲಿ ನಿತ್ಯ 2ಲಕ್ಷ ವ್ಯವಹಾರ ನಡೆದರೆ, ಗುರುವಾರ 20 ಲಕ್ಷ ಠೇವಣಿಯಾಗಿದೆ. ಕೆನರಾ ಬ್ಯಾಂಕ್ ಅಲ್ಲಿ ದಿನನಿತ್ಯ 20 ಲಕ್ಷ ವ್ಯವಹಾರವಾದರೆ, 60 ಲಕ್ಷ ಜಮೆಯಾಗಿದೆ. ವಿಜಯ ಬ್ಯಾಂಕ್‌ನಲ್ಲಿ ನಿತ್ಯ 12 ಲಕ್ಷ ವ್ಯವಹಾರ ನಡೆಯುವಲ್ಲಿ 60 ಲಕ್ಷ ಸಂಗ್ರಹವಾಗಿದೆ. ಸಿಂಡಿಕೇಟ್ ಬ್ಯಾಂಕ್ ನಲ್ಲಿ ದಿನಂಪ್ರತಿ ಸುಮಾರು 30 ಲಕ್ಷ ವ್ಯವಹಾರ ನಡೆಯುವಲ್ಲಿ 1.5 ಕೋಟಿ ಜಮೆಯಾಗಿದೆ.

ಜಾಹೀರಾತು

ಎಸ್‌ಬಿಎಂನಲ್ಲಿ 2 ಲಕ್ಷ ವ್ಯವಹಾರ ನಿತ್ಯವಾದರೆ ನೋಟಿನ ಬದಲಾವಣೆಯ ಅಂಗವಾಗಿ ಸುಮಾರು 8 ಲಕ್ಷ ಸಂಗ್ರಹವಾಗಿದೆ. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ನಿತ್ಯ 40 ಲಕ್ಷ ವ್ಯವಹಾರ ನಡೆಯುವಲ್ಲಿ 2 ಕೋಟಿ ಸಂಗ್ರಹವಾಗಿದೆ. ಎಸ್‌ಡಿಸಿಸಿ ಬ್ಯಾಂಕ್ ನಲ್ಲಿ 70 ಲಕ್ಷ ನಿತ್ಯ ವ್ಯವಹಾರ ವಾದರೆ ನೋಟಿನ ಬದಲಾವಣೆಯಿಂದ 1 ಕೋಟಿ ಸಂಗ್ರಹವಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.