ಕೊಳ್ನಾಡು: 94 ಸಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ಜಮೀನಿನ ಪಕ್ಕದ ಸುರಕ್ಷತಾ ವಲಯದ (ಬಫ್ಫರ್) 100 ಮೀಟರ್ ವ್ಯಾಪಿಯೊಳಗಡೆ ಮನೆಕಟ್ಟಿ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಲು ಅರಣ್ಯ ಕಾಯ್ದೆಯಿಂದ ಸೆಕ್ಷನ್ 41(2) ನಿಯಮದಡಿ ಈ ಹಿಂದೆ ಅವಕಾಶವಿಲ್ಲದೆ ಅನೇಕ ಜನ 94ಸಿ ಯೋಜನೆಯಿಂದ ವಂಚಿತರಾಗಿದ್ದರು. ಇದನ್ನು ಮನಗಂಡು ಅರಣ್ಯ ಸಚಿವರಾದ ಬಿ ರಮಾನಾಥ ರೈ ಈ ಕಾಯ್ದೆಗೆ ತಿದ್ದುಪಡಿ ತಂದು ಈ ವ್ಯಾಪ್ತಿಯೊಳಗಡೆ ಬರುವ ಮನೆಗಳಿಗೂ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದು ಹಕ್ಕುಪತ್ರ ಪಡೆಯುವ ಅವಕಾಶವನ್ನು ಮಾಡಿ ಕೊಟ್ಟಿರುತ್ತಾರೆ ಎಂದು ಕೊಳ್ನಾಡು ಗ್ರಾಪಂ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹೇಳಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಸಂಬಂಧಪಟ್ಟವರನ್ನು ಸಂಪರ್ಕಿಸಿ ಪ್ರಯೋಜನೆ ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…